ಮಂಗಳವಾರ, ಜುಲೈ 5, 2011

ಭಾಗವತ ಕಾಳಿಂಗ ನಾವುಡರ ನೆನಪುಗಳು

ನಾವುಡರ ನೆನಪುಗಳು

ಇತ್ತೀಚೆಗೆ ಕಾಳಿಂಗ ನಾವುಡ ಪ್ರಶಸ್ತಿಯನ್ನು ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಪ್ರದಾನ ಮಾಡಲಾಯಿತು. ನಾವುಡರು ಜನಪ್ರಿಯರಾಗುತ್ತಿದ್ದ ಕಾಲ. ಧಾರೇಶ್ವರರು ದಿ. ನಾರಣಪ್ಪ ಉಪ್ಪೂರರೊಂದಿಗೆ ತಿರುಗಾಟ ಮಾಡುತ್ತಿದ್ದರು. ಉಪ್ಪೂರರ ಗರಡಿಯಲ್ಲಿ ಪಳಗುತ್ತಿದ್ದರು. ಧಾರೇಶ್ವರರು ಆಗಲೇ ಈ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದರು.  ನಾವುಡರ ನಂತರ ಈ ಕ್ಷೇತ್ರವನ್ನು ಧಾರೇಶ್ವರರು ತುಂಬಿಸಿದರು ಎಂದರೆ ಅತಿಶಯೋಕ್ತಿಯಾಗದು. ಧಾರೇಶ್ವರರಿಗೆ ನಾವುಡರ ಬಗ್ಗೆ ಅಪಾರ ಗೌರವ. ಇಂದಿಗೂ ತನ್ನ ಮೇಲಾದ ನಾವುಡರ ಪ್ರಭಾವಗಳನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ.
ಕಾಳಿಂಗ ನಾವುಡರ ಬಗ್ಗೆ ಕೆಲವು ತಿಂಗಳ ಹಿಂದೆ ಮಹಾಲಿಂಗ ಭಟ್ಟರು ಸುದೀರ್ಘ ಲೇಖನವೊಂದನ್ನು  ಪ್ರಜಾವಾಣಿಯಲ್ಲಿ ಬರೆದರು. ನಾವುಡರ ಅಭಿಮಾನಿಗಳಿಗೆ ಇದು ಅತ್ಯಂತ ಸಂತಸ ತಂದು ಕೊಟ್ಟಿತು.  ಈ ಲೇಖನವನ್ನು ಓದುತ್ತಿದ್ದಂತೆ ನಾವುಡರ ಇನ್ನಿತರ ಗುಣಗಳು ನನ್ನ ನೆನಪಿಗೆ ಬಂದವು. ಮಾಹಾಲಿಂಗ ಭಟ್ಟರು ಹೇಳದ ಈ ಅಂಶಗಳನ್ನು ಅವರ ಅಭಿಮಾನಿಗಳೊಂದಿಗೆ ಏಕೆ ಹಂಚಿಕೊಳ್ಳಬಾರದೆಂದು ಈ ಲೇಖನಕ್ಕೆ ಕೈ ಹಾಕಿದೆ.
ನನ್ನ ಗಣಗಳು ಎಲ್ಲಾ ಕಡೆ ಇದ್ದಾರೆ :
 ನಾವುಡರು ಜನಪ್ರಿಯರಾಗಿದ್ದ ಕಾಲ.ಎಲ್ಲೆಡೆ ಅವರ ಅಭಿಮಾನಿಗಳು ಅವರಿಗೆ ಸನ್ಮಾನ ಏರ್ಪಡಿಸುತ್ತಿದ್ದರು. ಸಾಮಾನ್ಯವಾಗಿ ಸಿದ್ದಾಪುರದ ಆಸುಪಾಸು ಪ್ರದೇಶಗಳಲ್ಲಿ ಅವರಿಗೆ ಸನ್ಮಾನಗಳಾದಾಗ ಅವರ ಬಗ್ಗೆ ಮಾತನಾಡುವ ಅವಕಾಶ ನನಗೇ ಲಭಿಸುತ್ತಿತ್ತು. ನಾವುಡರೇ ನನ್ನ ಹೆಸರನ್ನು ಸೂಚಿಸುತ್ತಿದ್ದರು ಎಂದು ಆಮೇಲೆ ತಿಳಿಯಿತು. ಒಮ್ಮೆ ಶಂಕರನಾರಾಯಣದಲ್ಲಿ ಅವರಿಗೆ ಸನ್ಮಾನ. ಅಂದಿನ ಶಾಸಕರಾದ ದಿ. ಜಿ.ಎಸ್.ಆಚಾರ್ಯರು ಅಂದಿನ ಸಭೆಯಲ್ಲಿ ನಾವುಡರನ್ನು ಸನ್ಮಾನಿಸುವವರು. ನಾವುಡರು ಶಂಕರನಾರಾಯಣದ ಶಿವರಾಮ ಶೆಟ್ಟರ(ಭಾಗವತ ಸುರೇಶ ಶೆಟ್ಟರ ತಂದೆ) ಮನೆಯಲ್ಲಿ ಅಂದು ವಿಶ್ರಾಂತಿ ಪಡೆಯುತ್ತಿದ್ದರು. ನಾವುಡರನ್ನು ಆಟ ನಡೆಯುವ ಸ್ಥಳಕ್ಕೆ ಕರೆದುಕೊಂಡು  ಬರುವ ಹೊಣೆ ನನ್ನ ಮೇಲೆ ಬಿತ್ತು. ಆಗ ನಾವುಡರಲ್ಲಿ ಒಂದು ಬೈಕ್ ಇತ್ತು. ರಾತ್ರಿ ಸುಮಾರು 9 ಗಂಟೆಯ ಸಮಯ. ಬೈಕಿನ ಹಿಂದೆ ಕುಳಿತುಕೊಳ್ಳುವಂತೆ ನಾವುಡರು ಸೂಚಿಸಿದರು. ಬೈಕ್ ಸ್ವಲ್ಪ ಎತ್ತರದ ಗುಡ್ಡ ಪ್ರದೇಶವನ್ನು ಹತ್ತುತ್ತಿತ್ತು. ಅಕಸ್ಮಾತ್ತಾಗಿ ಬೈಕ್ ಬಿದ್ದಿತು. ನಾನು ಕೆಳಗಡೆ ಉರುಳಿದೆ. ಪೆಟ್ಟೇನೂ ಆಗಲಿಲ್ಲ. ನಾವುಡರೇ ನನ್ನನ್ನು ಸಮಧಾನ ಪಡಿಸಿ ಮತ್ತೆ ಕೂರುವಂತೆ ವಿನಂತಿಸಿದರು. ಮುಂದೆ ಸರಾಗವಾಗಿ ಬೈಕ್ ಪ್ರಯಾಣ. ಹೀಗೆ ಹೋಗುವಾಗ ನಾವುಡರನ್ನು ಕೇಳಿದೆ. ನಾವುಡರೇ, ನಿಮಗೆ ಯಾರಾದರೂ ಶಿಷ್ಯರಿದ್ದಾರೆಯೇ?. ಈ ತನಕ ನನಗೆ ಯಾವ ಶಿಷ್ಯರೂ ಇಲ್ಲ ಎಂದರು. ಅನಂತರ ಅವರೇ ನಗುತ್ತಾ ಹೇಳಿದರು. ಆದರೆ ನನಗೆ ಗಣಗಳಿದ್ದಾರೆ. ತಾಳ ಹಿಡಿದ ತತ್ಕ್ಷಣ ನಾನು ಅವರ ಮೈಮೇಲೆ ಬರುತ್ತೇನೆ.   ಇದನ್ನು ಇಂದಿನ ಸನ್ಮಾನ ಸಮಾರಂಭದಲ್ಲಿ ಹೇಳಬಹುದೇ ?.  ಎಂದು ಕೇಳಿದೆ. ಖಂಡಿತ ಹೇಳು. ಏನೂ ಆಕ್ಷೇಪವಿಲ್ಲ ಎಂದರು. ಅಂದಿನ ಸಭೆಯಲ್ಲಿ ನಾವುಡರ ಹಾಸ್ಯ ಲೇಪನದ ಈ ಮಾತು ಬಹಳಷ್ಟು ಜನರಲ್ಲಿ ನಗುವನ್ನು ಉಕ್ಕಿಸಿತು.
ಬೈಕಿನಲ್ಲಿ ಕಾಳಿಂಗ :ಒಮ್ಮೆ ಉಡುಪಿಯಲ್ಲಿ ನಡೆದು ಹೋಗುತ್ತಿದ್ದೆ. ಹೋಟೆಲ್ ನಟರಾಜ್ ಎದುರು ಬೈಕ್ ಒಂದು ನಿಂತಿತ್ತು. ಅಂದಿನ ಸಾಲಿಗ್ರಾಮ ಮೇಳದ ಯಜಮಾನರಾದ ಶ್ರೀನಿವಾಸ ಹೆಗ್ಡೆಯವರು ಆ ಹೋಟೆಲಿನ ಮಾಲಿಕರು. ಬೈಕ್ನ ಹಿಂಭಾಗದಲ್ಲಿ ಕಾಳಿಂಗ ಎಂದು ಬರೆದಿತ್ತು. ಇದು ನಾವುಡರದ್ದೇ ಬೈಕ್. ನಾವುಡರು ಬಹುಶ: ಈ ಹೋಟೆಲಿನಲ್ಲಿರಬಹುದು. ಹೀಗೆ ಊಹಿಸಿ ಹೋಟೆಲ್ನ ಮಹಡಿಗಳನ್ನೇರಿದೆ. ನಾವುಡರ ಅಭಿಮಾನಿಗಳನೇಕರು ಅಲ್ಲಿದ್ದರು. ನಾನು ಕಾಳಿಂಗ ನಾವುಡರನ್ನು ಭೇಟಿಯಾಗಬೇಕಿತ್ತು ಎಂದೆ. ನಾವುಡರು ಪ್ರತ್ಯಕ್ಷರಾದರು. ಆಶ್ಚರ್ಯದಿಂದ ಪ್ರಶ್ನಿಸಿದರು. ನಾನು ಇಲ್ಲಿ ಇರುವ ವಿಚಾರ ಯಾರು ತಿಳಿಸಿದರು ?. ನಿಮ್ಮ ಬೈಕಿನ ಹಿಂಭಾಗದ ಹೆಸರು ಎಂದೆ. ಕೂಡಲೇ ನಾವುಡರು ತುಸು ನಗೆಯಿಂದ ನಾಳೆಯಿಂದ ಆ ಹೆಸರನ್ನೇ ಅಳಿಸುತ್ತೇನೆ ಎಂದರು.
ಆಕಾಶವಾಣಿಯ ಘಟನೆ :ಒಮ್ಮೆ ನಾವುಡರನ್ನು ಸಂದರ್ಶನ ಮಾಡುವಂತೆ ಆಕಾಶವಾಣಿಯೊಂದರಿಂದ ಕರೆ ಬಂದಿತು. ನಾವುಡರನ್ನು ಹುಡುಕಿಕೊಂಡು ಗುಂಡ್ಮಿಯ ಅವರ ಮನೆಗೆ ಧಾವಿಸಿದೆ. ನಾವುಡರು ಬಂದ ಕಾರಣ ಕೇಳಿದರು. ತಮ್ಮನ್ನು ಸಂದಶರ್ಿಸಲು ಕರೆ ಬಂದಿದೆ. ಆಕಾಶವಾಣಿಗೆ ಹೋಗೋಣ ಎಂದೆ. ಯಾಕೋ ಆಕಾಶವಾಣಿಯ ಬಗ್ಗೆ ನಾವುಡರಿಗೆ ಬೇಸರ. ತಾನು ಬರುವುದಿಲ್ಲ ಎಂದು ನುಡಿದರು. ಒಮ್ಮೆ ಮೌನವಾದೆ. ಮತ್ತೆ ಐದು ನಿಮಿಷ ಬಿಟ್ಟು ನಿನಗೆ ಬೇಸರವಾಗುವುದಾದರೆ ಬರುತ್ತೇನೆ. ನಿನ್ನ ಮೇಲಿನ ಪ್ರೀತಿಯಿಂದಷ್ಟೇ ಎಂದರು. ಅಂತೂ ಕಾರಿನಲ್ಲಿ ಆಕಾಶವಾಣಿಯತ್ತ ಸಾಗಿದೆವು. ಆಕಾಶವಾಣಿಯಲ್ಲಿ ಅವರಿಗೆ ನೀಡಿದ ಚೆಕ್ಕನ್ನೂ ನಾವುಡರು ಅನಂತರ ಸ್ವೀಕರಿಸಲಿಲ್ಲ. ಅದನ್ನೂ ನನಗೆ ಕೊಟ್ಟು ನೀನೇ ಇದರ ಪ್ರಯೋಜನ ಪಡೆ ಎಂದರು.
ಪುರಭವನದ ಆಟ :ಒಮ್ಮೆ ಮಂಗಳೂರಿನ ಪುರಭವನದಲ್ಲಿ ತೆಂಕು ಮತ್ತು ಬಡಗುತಿಟ್ಟುಗಳ ಆಟ. ಮೊದಲು ತೆಂಕಿನ ಪ್ರಸಂಗ. ಅನಂತರ ಬಡಗಿನವರ ಸರದಿ. ನಾವುಡರಿನ್ನೂ ಬಂದಿರಲಿಲ್ಲ.  ಆಗಲೇ ಜನರ ಗುಸು ಗುಸು ಆರಂಭವಾಗಿತ್ತು. ಅವರು ವಿಮಾನದಲ್ಲಿ ಬರುತ್ತಿದ್ದಾರಂತೆ. ತೆಂಕಿನವರ ಆಟ ಮುಗಿಯುವುದರೊಳಗೆ ಪುರಭವನವನ್ನು ಪ್ರವೇಶಿಸುತ್ತಾರಂತೆ. ಅಂತೂ ನಾವುಡರು ಪುರಭವನಕ್ಕೆ ಬಂದರು. ಅವರ ಅಭಿಮಾನಿಗಳಾದ ನಾವು ಕೆಲವರು ಅವರ ವಿಶ್ರಾಂತಿ ಕೋಣೆಗೆ ತಲುಪಿದೆವು. ನನ್ನ ಸ್ನೇಹಿತನೊಬ್ಬ ಸ್ವಲ್ಪ ಗಾಬರಿಯಿಂದ ಹೇಳಿದ. ನಾವುಡರೇ, ಈಗಾಗಲೇ ತೆಂಕಿನ ಭಾಗವತರು ಕಪ್ಪು ಮೂರರಲ್ಲಿ ಪದ್ಯ ಹೇಳುತ್ತಿದ್ದಾರೆ. ನಿಮಗೆ ಇದನ್ನು ಮೀರಿಸಲು ಸಾಧ್ಯವೇ?. ನಾವುಡರು ಒಂದು ಕ್ಷಣ ತೆಂಕಿನ ಭಾಗವತರ ಪದ್ಯ ಆಲಿಸಿದರು. ಮತ್ತೆ ಹೇಳಿದರು. ನೋಡಿ ಪದ್ಯ ಹೇಳುವುದೆಂದರೆ ಕಿರುಚಾಟವಲ್ಲ. ಇದೇ ಶ್ರುತಿಯಲ್ಲಿ ನಾನು ಲೀಲಾಜಾಲವಾಗಿ ಹಾಡುವ ವಿಶ್ವಾಸವಿದೆ. ಆಟ ಮುಗಿದ ನಂತರ ಬಂದು ಅಭಿಪ್ರಾಯ ತಿಳಿಸಿ. ಅಂದು ನಾವುಡರು ಕೀಚಕ ವಧೆಯ ಪದ್ಯಗಳನ್ನು ಅದೇ ಶ್ರುತಿಯಲ್ಲಿ ಲೀಲಾಜಾಲವಾಗಿ ಹಾಡಿ ಪ್ರೇಕ್ಷಕರಿಂದ ಅಪಾರ ಕರತಾಡನಗಳನ್ನು ಗಿಟ್ಟಿಸಿಕೊಂಡರು.
ಜಾನುವಾರುಕಟ್ಟೆ ಭಾಗವತರಿಂದ ಭೇಷ್ ಎಂಬ ಹೆಗ್ಗಳಿಕೆ :
ಒಮ್ಮೆ ಮಂದತರ್ಿ ಸಮೀಪ ಸಾಲಿಗ್ರಾಮ ಮೇಳದ ಆಟ. ಅಂದು ಹಿರಿಯ ಭಾಗವತ ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್ ಆಟಕ್ಕೆ ಬಂದಿದ್ದರು. ಚೌಕಿಗೆ ತೆರಳಿದ ಅವರಿಗೆ ನಾವುಡರು ಗೌರವಪೂರ್ವಕವಾಗಿ ಕೈಮುಗಿದರು. ಜಾನುವಾರುಕಟ್ಟೆ ಭಾಗವತರು ನಾವುಡರನ್ನು ತಮಾಷೆಗಾಗಿ ಕೆಣಕಿದರು. ಇಂದು ಭಾಗವತಿಕೆ ಹೆಸರಲ್ಲಿ ಮಂಗನಾಟ ಮಾಡಿದರೆ ನಾನು ಸುಮ್ಮನಿರುವುದಿಲ್ಲ.  ಭಾಗವತರೇ, ಇಂದು ಆಟ ನೋಡಿ. ಶುದ್ಧ ಸಂಪ್ರದಾಯ ಶೈಲಿಯಲ್ಲಿ ನನ್ನ ಪದ್ಯಗಳಿರುತ್ತವೆ. ಅಂದು ನಾವುಡರು ಪರಂಪರೆಯ ಶೈಲಿಯನ್ನು ಬಿಟ್ಟು ಹೋಗಲೇ ಇಲ್ಲ. ಬೆಳಗ್ಗೆ ಜಾನುವಾರುಕಟ್ಟೆಯವರೇ ಕೈಮುಗಿದು, ನೀನೂ ಹೊಸತಕ್ಕೂ, ಹಳತು ಎರಡಕ್ಕೂ ಸಮರ್ಥ ಮಾರಾಯ. ಇಂದಿನಿಂದ ನಾನೂ ನಿನ್ನ ಅಭಿಮಾನಿ.
ನಾವುಡರು ಭಾಗವತಿಕೆಗೆ ಒಂದು ಹೊಸ ಮೆರುಗನ್ನು ನೀಡಿದವರು. ಅವರ ಕಾಲದಲ್ಲಿ ಯಕ್ಷಗಾನಕ್ಕೆ ವಿದ್ಯಾವಂತರ ಒಂದು ವರ್ಗವೇ ಪ್ರೇಕ್ಷಕರಾಗಿ ನಿಮರ್ಾಣವಾಗಿತ್ತು. ಆದರೆ ಅವರ ಕಾಲಾನಂತರ ಆ ಗುಂಪು ಮತ್ತೆ ಕಲೆಯಿಂದ ದೂರ ಸರಿಯಿತು.  ನಾವುಡರಲ್ಲಿ ಕಲಾಪ್ರತಿಭೆಯೊಂದೇ ಹುದುಗಿರಲಿಲ್ಲ. ಅವರಲ್ಲಿ ಮಾನವೀಯ ಗುಣಗಳೂ ಹುದುಗಿದ್ದವು.  ಪರರ ಕಷ್ಟಕ್ಕೆ ಸ್ಪಂದಿಸುವ ಅವರ ಮನೋಭಾವದ ಪರಿಚಯ ಕೆಲವರಿಗಷ್ಟೇ ತಿಳಿದಿತ್ತು. ನಾವುಡರ ಸ್ಥಾನ ತುಂಬುವ ಸಮರ್ಥ ಭಾಗವತ ಇನ್ನು ಮುಂದೆ ಬಂದಾರೆ ?. ಈ ಪ್ರಶ್ನೆ ಇಂದಿಗೂ ಯಕ್ಷಗಾನ ಅಭಿಮಾನಿಗಳನ್ನು ಕಾಡುತ್ತಿದೆ.
   ಡಾ.ಶ್ರೀಕಾಂತ್ ಸಿದ್ದಾಪುರ 

ಶನಿವಾರ, ಜುಲೈ 2, 2011

ನಕ್ಕುಬಿಡಿ ಸಾರ್

ನಕ್ಕುಬಿಡಿ ಸಾಕು
 ಸರಸ ಸಂಸಾರ
ಹಾಸ್ಯ ಎಂದರೆ ಯಾರಿಗೆ ಇಷ್ಟವಾಗದು ?. ಭಾಷಣವಿರಲಿ, ಲೇಖನವಿರಲಿ ಹಾಸ್ಯದ ಸನ್ನಿವೇಶ ಬಂತೆಂದರೆ ಅದರ ಆನಂದವೇ ಬೇರೆ. ಹಾಸ್ಯದ ಸಂದರ್ಭವನ್ನೂ ಗಂಭೀರವಾಗಿ ಸ್ವೀಕರಿಸುವ ಮಂದಿಯೂ ಇರಬಹುದು. ಅದರಲ್ಲೂ ದೋಷಗಳನ್ನೇ ಹುಡುಕುವ ಹವ್ಯಾಸ. ಇದು ರಸದಲ್ಲಿ ಕಸ ಹುಡುಕುವ ಪ್ರಯತ್ನವಷ್ಟೇ.  ಜೀವನವನ್ನು ರಸಮಯವಾಗಿರಿಸಲು ಹಾಸ್ಯಪ್ರಜ್ಞೆಯನ್ನು ನಮ್ಮವರು ಎಲ್ಲಾ ಕ್ಷೇತ್ರಗಳಲ್ಲೂ ತಂದಿರುತ್ತಾರೆ. ಪತಿ ಮತ್ತು ಪತ್ನಿಯರ ಸಂಬಂಧವೂ ಇದರಿಂದ ಹೊರತಾಗಿಲ್ಲ.  ಸತಿ ಮತ್ತು ಪತಿಯರ ಸಂಬಂಧ ಹೇಗಿರಬೇಕು ?. ನಮ್ಮವರು ಇದನ್ನು ವಿವರಿಸಲು ಸಂಖ್ಯಾಶಾಸ್ತ್ರದ ಮರೆಹೋಗಿರುತ್ತಾರೆ. ಸತಿ ಮತ್ತು ಪತಿಯರ ಸಂಬಂಧವು 63 ರಂತಿರಬೇಕಂತೆ.  36 ರಂತಿರಬಾರದಂತೆ.  ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ ಎಂಬುದು ನಮ್ಮ ಜನಪದರ ನಿಲುವು. ಕೆಲವರು ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು ಹಾಸ್ಯ ಚಟಾಕಿ ಹಾರಿಸುವುದುಂಟು. ಅಧ್ಯಾತ್ಮ ಕ್ಷೇತ್ರದಲ್ಲೂ ಈ ಸಂಬಂಧದ ಕುರಿತ ನಗೆಹನಿಗಳು ಸಾಕಷ್ಟಿವೆ. ಅಧ್ಯಾತ್ಮವನ್ನು ವಿಶಿಷ್ಟವಾದ ರೀತಿಯಲ್ಲಿ ಪ್ರತಿಪಾದಿಸಿದ ಓಶೋ ನೀಡುವ ಕೆಲವು ನಗೆಹನಿಗಳಿಲ್ಲಿ ಉಲ್ಲೇಖಾರ್ಹ.
                     *******
 ಗಂಡನ ಇತ್ತೀಚಿನ ವರ್ತನೆ ಕಂಡು ಸತಿಯೊಬ್ಬಳು ಚಿಂತಾಕ್ರಾಂತಳಾಗಿದ್ದಾಳೆ. ಅವರು ನೇರವಾಗಿ ಕುಟುಂಬದ ವೈದ್ಯರೊಬ್ಬರ ಬಳಿ ಬರುತ್ತಾಳೆ.  ನಮ್ಮದು ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ಸಂಸಾರ ಸಾರ್.  ಈ ತನಕ ತೃಪ್ತಿಯಿಂದಲೇ ಇದ್ದೆವು. ಆದರೆ ನಿಮ್ಮ ಹತ್ತಿರ ತಲೆನೋವಿನ ನೆಪದಲ್ಲಿ ಚಿಕಿತ್ಸೆ ಪಡೆದ ಅನಂತರ ನಮ್ಮವರ  ವರ್ತನೆಯೇ ಬದಲಾಗಿ ಬಿಟ್ಟಿದೆ. ನನ್ನನ್ನು ಕಂಡರೆ  ಯಾಕೋ ಮುಖ ಸಿಂಡರಿಸುತ್ತಾರೆ. ನನ್ನನ್ನು ನೋಡುವುದನ್ನೂ ಈಗೀಗ ಮರೆತು ಬಿಟ್ಟಿರುತ್ತಾರೆ. ನೀವೇನು ಚಿಕಿತ್ಸೆ ನೀಡಿದಿರೋ ದೇವರೇ ಬಲ್ಲ. ವೈದ್ಯರಿಗೆ ಆಶ್ಚರ್ಯವಾಯಿತು. ಚಿಕಿತ್ಸೆ ! ನಾನು ಅಂತಹ ಚಿಕಿತ್ಸೆ ನೀಡಿಲ್ಲವಲ್ಲ!. ಅವರಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಕನ್ನಡಕವೊಂದನ್ನಷ್ಟೇ ಶಿಫಾರಸು ಮಾಡಿದೆ. ಬಹುಶ: ಕನ್ನಡಕ ಧರಿಸಿದ ಮೇಲೆ ದೃಷ್ಟಿಯಲ್ಲಿ ಸುಧಾರಣೆಯಾಗಿರಬಹುದು.
*****
 ಗಂಡಸೊಬ್ಬನಿಗೆ  ಮದುವೆಯಾಯಿತು. ಅವನ ಹೆಂಡತಿ ಮದುವೆಯ ಅನಂತರ ಗಂಡನನ್ನು ತಮಾಷೆಗಾಗಿ ಕೇಳಿದಳು.  ರೀ, ನಾನು ನನ್ನ ಮುಖವನ್ನು ಯಾರ್ಯಾರಿಗೆ ತೋರಿಸಬಹುದು?. ಪಾಪ! ಆ ಪತಿರಾಯ ತನ್ನ ಹೆಂಡತಿಯ ಮುಖವನ್ನೇ ಅಂದಿನ ತನಕ ಸರಿಯಾಗಿ ನೋಡಿರಲಿಲ್ಲ. ಯಾವುದಕ್ಕೂ ಮೊದಲು ನನಗೆ ತೋರಿಸು. ಅನಂತರ ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದ. ಹೆಂಡತಿ ಸಂತೋಷದಿಂದ ತನ್ನ ಮುಖದ ಪರದೆಯನ್ನು ಸರಿಸಿದಳು. ಪತಿ ಮಹಾಶಯನು ಕತ್ತನ್ನು ಬೇರೆ ಕಡೆಗೆ ತಿರುಗಿಸಿದ. ಹೆಂಡತಿಗೆ ಆಶ್ಚರ್ಯ. ಕೂಡಲೇ ಪತಿರಾಯ ಹೇಳಿಯೇ ಬಿಟ್ಟ. ದಯವಿಟ್ಟು ಇನ್ನು ಮುಂದೆ ನನ್ನನ್ನು ಬಿಟ್ಟು ಬೇರಾರಿಗಾದರೂ ತೋರಿಸು. ನನ್ನ ಆಕ್ಷೇಪವಿಲ್ಲ.
******
 ಸಂಸಾರವೊಂದರಲ್ಲಿ ಹೆಂಡತಿಗೆ ಸಂಗೀತ ಕಲಿಯುವ ಹುಚ್ಚು. ಸಂಗೀತ ಶಾಲೆಗೂ ಸೇರಿದಳು. ದಿನಾ ಮನೆಯಲ್ಲಿ ಅಭ್ಯಾಸ ಆರಂಭವಾಯಿತು. ಹೆಂಡತಿ ಹಾಮರ್ೋನಿಯಂ ಹಿಡಿದು ಕುಳಿತಳೆಂದರೆ ಗಂಡ ಮನೆಯ ಮುಂದೆ ತಿರುಗಾಡಲು ಆರಂಭಿಸುತ್ತಾನೆ. ಗಂಡನ ವರ್ತನೆಗೆ ಬೇಸತ್ತ ಹೆಂಡತಿ ಕೇಳಿದಳು. ರೀ, ನಾನು ಸಂಗೀತ ಅಭ್ಯಾಸ ಮಾಡುವಾಗ ನೀವು ಮನೆಯ ಎದುರುಗಡೆ ಹಿಂದೆ ಮುಂದೆ ತಿರುಗುವುದೇಕೆ?.  ಮತ್ತೇನಲ್ಲ ಪ್ರಿಯೆ, ಅಕ್ಕ ಪಕ್ಕದವರು ನಾನು ನಿನಗೆ ಬಡಿದೆನೆಂದು ಭಾವಿಸದಿರಲಿ ಎಂದು.
******
 ಹುಲಿಯೊಂದರ ಮದುವೆ ಸನ್ನಿವೇಶ. ಎಲ್ಲಾ ಹುಲಿಗಳೂ ನತರ್ಿಸುತ್ತಿವೆ. ಈ ಹುಲಿಗಳ ಗುಂಪಿನಲ್ಲಿ ಇಲಿಯೊಂದೂ ನತರ್ಿಸುತ್ತಿದೆ. ಹುಲಿಗಳಿಗೆ ಆಶ್ಚರ್ಯ. ನಮ್ಮ ನಡುವೆ ಇಲಿಗೇನು ಕೆಲಸ !. ಹುಲಿಯೊಂದು ಕೇಳಿಯೇ ಬಿಟ್ಟಿತು. ನಿನಗೇನು ಇಲ್ಲಿ ಕೆಲಸ?. ಇಲಿ ಹೇಳಿತು ಮದುಮಗನ ಅಣ್ಣ ನಾನು. ಹುಲಿಗಳಿಗೆ ಅರ್ಥವಾಗಲಿಲ್ಲ. ಏನಿದರ ಅರ್ಥ?. ಸ್ವಲ್ಪ ಸರಿಯಾಗಿ ಹೇಳಿಬಿಡು. ಇಲಿ ಕೂಡಲೇ ಉತ್ತರಿಸಿತು.  ವಿಶೇಷ ಅರ್ಥ ಏನಿಲ್ಲ. ನಾನೂ ಮದುವೆಗೆ ಮೊದಲು ಹುಲಿಯಾಗಿಯೇ ಇದ್ದೆ.
******
 ಪತಿರಾಯನೊಬ್ಬ ತನ್ನ ಸ್ನೇಹಿತನಲ್ಲಿ ಅಳಲನ್ನು ತೋಡಿಕೊಂಡ. ಬೇರೆ ದಾರಿಯಿಲ್ಲ. ನಾನು ನನ್ನ ಪತ್ನಿಯೊಂದಿಗಿನ ಸಂಬಂಧಕ್ಕೆ ವಿಚ್ಛೇದನಾ ಅಜರ್ಿ ಸಲ್ಲಿಸುತ್ತಿದ್ದೇನೆ.  ಅಂತಹ ವಿರಸ ಏನು ಮಾರಾಯ? ಸ್ನೇಹಿತ ಪ್ರಶ್ನಿಸಿದ.  ಕಳೆದ ಮೂರು ತಿಂಗಳಿನಿಂದ ಆಕೆ ನನ್ನೊಂದಿಗೆ ಒಂದೂ ಮಾತನ್ನು ಆಡಿಲ್ಲ. ಸ್ನೇಹಿತ ಹೇಳಿದ. ಸ್ವಲ್ಪ ಯೋಚಿಸುವುದು ಕ್ಷೇಮ.  ಏಕೆಂದರೆ ಇಂತಹ ಹೆಂಡತಿ ಸಿಗಬೇಕಾದರೆ  ನಿಜವಾಗಿ ಅದೃಷ್ಟ ಮಾಡಿರಬೇಕು.
*******
 ಒಮ್ಮೆ ಮಗ ತಂದೆಯನ್ನು ಕುತೂಹಲದಿಂದ ಪ್ರಶ್ನಿಸಿದ. ಅಪ್ಪಾ, ವಾಕ್ಚಾತುರ್ಯ ಅಂತಾರಲ್ಲ ಹಾಗೆಂದರೇನು?.  ಮಗನೇ ಹಾಗೆಲ್ಲ ಹೇಳಿದರೆ ನಿನಗೆ ಅರ್ಥವಾಗದು. ಒಂದು ಉದಾಹರಣೆ ಮೂಲಕ ವಿವರಿಸುತ್ತೇನೆ. ನಿನ್ನ ಅಮ್ಮನೊಂದಿಗೆ ನಾನು ಹೀಗೆ ಹೇಳುತ್ತೇನೆ. ನಿನ್ನ ಮುಖ ನೋಡಿದರೆ ಗಡಿಯಾರವೂ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ. ಆಗ ನಿನ್ನ ಅಮ್ಮ ಸುಮ್ಮನಿದ್ದಾಳೇ?. ನಾನು ಮಹಾಮೂರ್ಖನಾಗುವುದಿಲ್ಲವೇ?. ಅದರ ಬದಲು ಹೀಗೆ ಹೇಳಿದರೆ ಅದು ವಾಕ್ಚಾತುರ್ಯ. ನಿನ್ನನ್ನು ನೋಡಿದರೆ ಸಮಯವೇ ನಿಂತು ಹೋಗುತ್ತದೆ.  ಈಗ ಅರ್ಥವಾಯ್ತೇ?.
*******
 ಲೈಂಗಿಕ ಸಂಬಂಧ ಸಂಸಾರವೊಂದರಲ್ಲಿ ತೃಪ್ತಿಕರವಾಗಿರಲಿಲ್ಲ. ಗಂಡ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡ. ವೈದ್ಯರು ಚಮತ್ಕಾರಕಾರಿ ಮಾತ್ರೆಗಳನ್ನು ಪತಿಗೆ ನೀಡಿದರು. ಒಂದು ತಿಂಗಳ ಅನಂತರ ಆತ ವೈದ್ಯರನ್ನು ಮತ್ತೇ ಭೇಟಿಯಾದ.  ವೈದ್ಯರೇ ನಿಮ್ಮ ಮಾತ್ರೆಗಳು ಪರಿಣಾಮಕಾರಿಯಾಗಿವೆ. ಸಂಶಯವೇ ಇಲ್ಲ.  ವೈದ್ಯರು ಕೇಳಿದರು. ನಿಮ್ಮ ಸುಧಾರಣೆಯ ಬಗ್ಗೆ ಪತ್ನಿಯ ಅನಿಸಿಕೆ?.  ಗಂಡ ಹೇಳಿದ. ಪತ್ನಿ?. ನಾನು ಒಂದು ತಿಂಗಳಿನಿಂದ ಮನೆಗೇ ಹೋಗಿಲ್ಲ.
 ಇಂದು ವಿರಸದ ಕಾಲ. ವಿಚ್ಛೇದನ ಸಮಾಜವನ್ನು ಬಾಧಿಸುತ್ತಿರುವ ಅತಿ ದೊಡ್ಡ ಸಮಸ್ಯೆ. ಇದಕ್ಕೂ ಕಾರಣ ವಿಪರೀತ ಒತ್ತಡ. ಒತ್ತಡದ ನಡುವೆ ಬದುಕನ್ನು ಹಸನಾಗಿರಿಸಲು ಹಾಸ್ಯವೊಂದೇ ಮದ್ದು. ಆದರೆ ಹಾಸ್ಯಕ್ಕೂ ಕೊರತೆ ನಮ್ಮ ದುರಂತ. ಹಾಗಾಗಿ ಹಾಸ್ಯದ ಕ್ಲಬ್ಬುಗಳು ಅಲ್ಲಲ್ಲಿ ತಲೆ ಎತ್ತುತ್ತಿವೆ. ಅಂತೂ ಬದುಕಿಗೆ ಹಾಸ್ಯ ಅನಿವಾರ್ಯ ಎಂಬುವುದರಲ್ಲಿ ಎರಡು ಮಾತಿಲ್ಲ.  ಹಾಸ್ಯಮಯ ಜೀವನಶೈಲಿಯಿಂದ  ವಿರಸವ ಮರೆಯೋಣ. ಸರಸವ ಸವಿಯೋಣ. ಸಮರಸದಿಂದ ಬದುಕೋಣ.
       ಡಾ.ಶ್ರೀಕಾಂತ್ ಸಿದ್ದಾಪುರ

 

ಶುಕ್ರವಾರ, ಜುಲೈ 1, 2011

ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದವರು -ಕನ್ನಡಕ್ಕೆ ಕೀರ್ತಿ ತಂದವರು

ಕುವೆಂಪು-1968 ಶ್ರೀ ರಾಮಾಯಣ ದರುಶನಂ

ದ.ರಾ.ಬೇಂದ್ರೆ-1974 ನಾಕುತಂತಿ

ಡಾ.ಶಿವರಾಮ ಕಾರಂತ-1978 ಮೂಕಜ್ಜಿಯ ಕನಸುಗಳು

ಮಾಸ್ತಿ ವೆಂಕಟೇಶ ಅಯ್ಯಂಗಾರ್ 1983 ಚಿಕವೀರರಾಜೇಂದ್ರ

ಡಾ.ಗೋಕಾಕ್ 1991 ಭಾರತ ಸಿಂಧುರಶ್ಮಿ

ಯು.ಆರ್. ಅನಂತಮೊರ್ತಿ 1994 ಸಮಗ್ರ ಸಾಹಿತ್ಯ
ಗಿರೀಶ್  ಕಾರ್ನಾಡ್ 1998 ಸಮಗ್ರ ಸಾಹಿತ್ಯಡಾ.ಕಂಬಾರ