ಮಂಗಳವಾರ, ನವೆಂಬರ್ 13, 2018

ಉಕ್ಕಿನ ಮನುಷ್ಯನಿಗೆ ಉನ್ನತ ಪ್ರತಿಮೆ
ಅಕ್ಟೋಬರ್ 31 ಭಾರತದ ಮೊದಲ ಗೃಹಮಂತ್ರಿ ಉಕ್ಕಿನ ಮನುಷ್ಯ ಸದರ್ಾರ್ ವಲ್ಲಭಭಾಯಿ ಪಟೇಲರ 143 ನೇ ಜನ್ಮ ದಿನೋತ್ಸವ. ಈ ಸಲದ ಜನ್ಮ ದಿನ ಪ್ರತಿ ವರ್ಷಕ್ಕಿಂತ ಭಿನ್ನವಾಗಿದೆ. ಗುಜರಾತಿನ ನರ್ಮದಾ ಜಿಲ್ಲೆಯ  ಸದರ್ಾರ್ ಸರೋವರದ ಡ್ಯಾಂ  ಹತ್ತಿರ ಉಕ್ಕಿನ ಮನುಷ್ಯನಿಗೆ ನಿಮರ್ಿಸಿದ ಉನ್ನತ ಪ್ರತಿಮೆಯನ್ನು ಕೇಂದ್ರ ಸರಕಾರವು ದೇಶಕ್ಕೆ ಅಪರ್ಿಸಲಿದೆ. ಸ್ವತ: ಪ್ರಧಾನಿ ನರೇಂದ್ರ ಮೋದಿಯವರೇ ಈ ಕಾರ್ಯದ ಉಸ್ತುವಾರಿ ವಹಿಸಿ ದೇಶದ ಮಹಾನ್ ನಾಯಕನಿಗೆ ರಾಷ್ಟ್ರದ ಪರವಾಗಿ ಗೌರವ ಸಲ್ಲಿಸಲಿದ್ದಾರೆ. 600 ಅಡಿ ಎತ್ತರದ ಪ್ರತಿಮೆಗೆ ಏಕತಾ ಪ್ರತಿಮೆಯೆಂದು ಹೆಸರಿಡಲಾಗಿದೆ. 
ಪಟೇಲರ ಹಿರಿಯರು :
ಸದರ್ಾರ್, ಉಕ್ಕಿನ ಮನುಷ್ಯ, ಭಾರತ ಒಕ್ಕೂಟ ನಿಮರ್ಾಪಕ ಮೊದಲಾದವುಗಳು ಇವರ ವ್ಯಕ್ತಿತ್ವ ಹಾಗೂ  ಕಾರ್ಯಶೈಲಿಯನ್ನು ಕೊಂಡಾಡಿ ಕೊಟ್ಟ ಬಿರುದುಗಳು. ವಲ್ಲಭಬಾಯಿ ಪಟೇಲರ ಪೂರ್ಣ ಹೆಸರು ವಲ್ಲಭಭಾಯ್ ಜವೇರ್ಭಾಯ್ ಪಟೇಲ್. ತಂದೆ ಜವೇರ್ಭಾಯಿ ಪಟೇಲ್, ತಾಯಿ ಲಾಡ್ಬಾಯ್. ಗುಜರಾತಿನ ಖೇಡಾ ಜಿಲ್ಲೆಯ ಕರಮ್ಸದ್ ಪಟೇಲರ ಹುಟ್ಟೂರು. ಅಕ್ಟೋಬರ್ 31, 1875 ರಲ್ಲಿ ಜನಿಸಿದರು. ವಲ್ಲಭಬಾಯ್ ಪಟೇಲರ ಹಿರಿಯರು ಕೃಷಿ ಕುಟುಂಬದವರು. ಪಂಜಾಬಿನಿಂದ ಗುಜರಾತಿಗೆ ವಲಸೆ ಬಂದು ನೆಲೆಸಿದವರು. ಅವರ ಮನೆತನದವರನ್ನು ಪಾಟಿದಾರರು ಎಂದು ಕರೆಯಲಾಗುತ್ತಿತ್ತು. ವ್ಯವಸಾಯದಲ್ಲಿ ತೊಡಗಿಸಿಕೊಂಡ ಈ ಮನೆತನದವರನ್ನು ಲೇವಾ ಪಾಟಿದಾರರು ಎಂದು ಕರೆಯುತ್ತಿದ್ದರು. ಸದರ್ಾರರ ತಂದೆ ಝಾನ್ಸಿರಾಣಿ ಲಕ್ಷೀಬಾಯಿಯವರ ದೇಶಭಕ್ತಿಗೆ ಮಾರು ಹೋಗಿ ಝಾನ್ಸಿಯವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸಮರದಲ್ಲಿ ಸೋಲನ್ನು ಕಂಡಾಗ ಅಧ್ಯಾತ್ಮದತ್ತ ಆಸಕ್ತರಾದರು. ಸ್ವಾಮಿ ನಾರಾಯಣ ಪಂಥದ ಸಹಜಾನಂದರ ಬೋಧನೆಗಳಿಂದ ಪ್ರಭಾವಿತರಾದರು. 
ಕಂಕಣ ಭಾಗ್ಯ :
ಸದರ್ಾರರಿಗೆ 16 ನೇ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬಂದಿತು. ಅವರ ಮಡದಿ ಜವೇರ್ಬಾ.  ಕರುಳಿನಲ್ಲಿ ಕಾಣಿಸಿಕೊಂಡ ರೋಗದಿಂದ ಶಸ್ತ್ರಚಿಕಿತ್ಸೆ ವಿಫಲವಾಗಿ 1909 ಜನವರಿ 11 ರಂದು ಅವರ ಮಡದಿ ಇಹಲೋಕ ಯಾತ್ರೆಗೆ ವಿದಾಯ ಹೇಳಿದರು. ಮಡದಿ ತೀರಿಕೊಳ್ಳುವಾಗ ಪಟೇಲರು ಕೋಟರ್ಿನಲ್ಲಿ ಗಹನವಾದ ದಾವೆಯೊಂದರಲ್ಲಿ ವಾದಿಸುತ್ತಿದ್ದರು. ಈ ನಡುವೆ ಮಡದಿ ಕೊನೆ ಉಸಿರೆಳೆದ ಮಾಹಿತಿ ಪಟೇಲರಿಗೆ ತಲುಪಿತು. ಒಂದು ಕ್ಷಣ ವಿಚಲಿತರಾದರೂ ಕರ್ತವ್ಯವಿಮುಖರಾಗದ ಪಟೇಲರು ದಾವೆಯಲ್ಲಿ ಸೂಕ್ತವಾದ ವಾದ ಮಂಡಿಸಿ ಯಶಸ್ಸನ್ನು ಸಾಧಿಸಿದರು. ಮಡದಿಯ ಮರಣದ ವೇಳೆ ಪಟೇಲರ ವಯಸ್ಸು 34. ಮರು ಮದುವೆಯಾಗುವ ಸಾಧ್ಯತೆಗಳಿದ್ದಾಗ್ಯೂ ಮಕ್ಕಳ ಮೇಲಿನ ಮಮತೆಯಿಂದ ಕೊನೆಯವರೆಗೂ ವಿವಾಹಿತರಾಗದೇ ಉಳಿದರು.
ಗಾಂಧಿ, ನೆಹರೂ, ಪಟೇಲರು :
ಪಟೇಲರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧಿಯವರ ಅನುಯಾಯಿಗಳಾಗಿದ್ದರು. ನೆಹರೂ, ಗಾಂಧಿ, ಪಟೇಲರು ತ್ರಿಮೂತರ್ಿಗಳಿದ್ದಂತೆ. ಆಗಾಗ ಸೈದ್ಧಾಂತಿಕ ಭಿನ್ನಮತ ಇವರ ನಡುವೆ ಕಾಣಿಸುತ್ತಿತ್ತು. ಆದರೆ ಪಟೇಲರು ಅವುಗಳನ್ನು ಅರಗಿಸಿಕೊಂಡು ಸಾಗುತ್ತಿದ್ದರು. ಆರಂಭದಲ್ಲಿ ಪಟೇಲರಿಗೆ ಗಾಂಧಿಯವರ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಒಮ್ಮೆ ರಾಷ್ಟ್ರೀಯ ಶಿಕ್ಷಣ ಶಾಲೆ ಸ್ಥಾಪಿಸುವ ನಿಮಿತ್ತ ಸಹಾಯ ಯಾಚಿಸಿ ಗಾಂಧಿಯವರು ಗುಜರಾತ್ ಕ್ಲಬ್ಬಿಗೆ ಆಗಮಿಸಿದ್ದರು. ಮಹಾತ್ಮರು ಬಂದರು ಎಂದು ಯಾರೋ ಹೇಳಿದಾಗ ಅನೇಕ ಮಹಾತ್ಮರಿದ್ದಾರೆ ಎಂದು ಉದಾಸೀನ ಸೂಚಿಸಿದರು. ಆದರೆ ಚಂಪಾರಣ್ಯ ಚಳವಳಿಯಲ್ಲಿ ಗಾಂಧೀಜಿಯವರ ಹೋರಾಟ ಸದರ್ಾರರ ಅಭಿಪ್ರಾಯಗಳನ್ನು ಬದಲಿಸಿತು. ಅಂದಿನಿಂದ ಗಾಂಧೀಜಿಯವರ ಬಗ್ಗೆ ವಿಶೇಷ ಗೌರವ ಹೊಂದಿದರು. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಗುಜರಾತ್ ಸಭಾವನ್ನು ಆರಂಭಿಸಿ, ಪಟೇಲರು ಅದರ ಕಾರ್ಯದಶರ್ಿಗಳಾದರು. ಉಪ್ಪಿನ ಸತ್ಯಾಗ್ರಹದಲ್ಲಿಯೂ ಗಾಂಧೀಜಿಯವರ ಮಾರ್ಗದರ್ಶನದಲ್ಲಿ ಭಾಗವಹಿಸಿದರು. ಆದರೆ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗುವ ವಿಚಾರ ಬಂದಾಗ, ನೆಹರೂ ಅಥವಾ ಗಾಂಧಿಯವರನ್ನು ಅಷ್ಟೇ ಕಠಿನವಾದ ಮಾತಿನಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಲು ಪಟೇಲರಿಗೆ ಸಾಧ್ಯವಾಗುತ್ತಿರಲಿಲ್ಲ. ಪಟೇಲರಿಗೆ ಭಾರತದ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿದ್ದರೂ, ಅದರಿಂದ ವಂಚಿತರಾದರೆಂಬ ನೋವು ಪಟೇಲರ ಅಭಿಮಾನಿಗಳಲ್ಲಿ ಇಂದಿಗೂ ಮನೆ ಮಾಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಲು ಪ್ರದೇಶ ಕಾಂಗ್ರೆಸ್ಗಳ ಅಭಿಪ್ರಾಯ ಸಂಗ್ರಹಿಸಲಾಯಿತು. 15 ರಲ್ಲಿ  12 ಅಧ್ಯಕ್ಷರು ಪಟೇಲರ ಪರ ನಿಂತರು. ಈಗ ಆಗುವ ಅಧ್ಯಕ್ಷರಿಗೇ ಮುಂದೆ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಅದೃಷ್ಟವು ನೆಹರೂರವರತ್ತ ಒಲವು ತೋರಿಸಿತು. ಗಾಂಧೀಜಿಯವರೂ ನೆಹರೂರವರನ್ನು ಬೆಂಬಲಿಸಿದರು. ತಮ್ಮ ಉಮೇದುವಾರಿಕೆಯಿಂದ ಹಿಂದೆ ಸರಿದ  ಪಟೇಲರು ಈ ಬಗ್ಗೆ ಯಾವುದೇ ಅಪಸ್ವರ ಎತ್ತದೆ ಗಾಂಧಿಯವರ ಮಾತಿಗೆ ಮನ್ನಣೆ ನೀಡಿದರು. ಗಾಂಧೀಜಿಯವರು ಅಗಲಿದಾಗ ಲಾಡರ್್ ಮೌಂಟ್ ಬ್ಯಾಟನ್ ಅವರು ನೆಹರೂ ಮತ್ತು ಪಟೇಲರಿಗೆ ಹೇಳಿದ ಮಾತು ಇಲ್ಲಿ ಗಮನಾರ್ಹ. ಗಾಂಧೀಜಿಯವರು ತಮ್ಮ ಅತ್ಯಂತ ಪ್ರಿಯವಾದ ಬಯಕೆ ನೆಹರೂ ಮತ್ತು ಪಟೇಲರ ನಡುವೆ ಹೊಂದಾಣಿಕೆ ತರುವುದು ಎಂದು ನನಗೆ ಹೇಳಿದ್ದರು. (ಮನ್ನಾರ್ ಕೃಷ್ಣರಾವ್ ಬರೆದ ಸದರ್ಾರ್ ವಲ್ಲಭಭಾಯ್ ಪಟೇಲ್ ಜೀವನ ಚರಿತ್ರೆ ). ಈ ಮಾತನ್ನು ಕೇಳಿ ತತ್ಕ್ಷಣ ನೆಹರೂ ಮತ್ತು ಪಟೇಲರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡರಂತೆ. 
ಭಾರತ ಒಕ್ಕೂಟ ನಿಮರ್ಾಪಕ :
ಸ್ವಾತಂತ್ರ್ಯ ಭಾರತಕ್ಕೆ ಪಟೇಲರ ಬಹುದೊಡ್ಡ ಕೊಡುಗೆ ಭಾರತ ಒಕ್ಕೂಟ ನಿಮರ್ಾಣ. ಅದರ ನಿಮರ್ಾಪಕರೆಂಬ ಖ್ಯಾತಿ ಪಟೇಲರಿಗೆ ಸಲ್ಲುತ್ತದೆ.  ಸ್ವತಂತ್ರ ಭಾರತದಲ್ಲಿ ಸುಮಾರು 565 ರಾಜರುಗಳಿದ್ದರು. ಅವರನ್ನು ಒಕ್ಕೂಟದೊಳಗೆ ತರುವುದು ಸುಲಭದ ಕೆಲಸವಲ್ಲ. ಆದರೆ ಅದನ್ನು  ರಾಜಕೀಯ ತಂತ್ರಗಾರಿಕೆ ಬಳಸಿಕೊಂಡು ಸಮರ್ಥವಾಗಿ ನಿಭಾಯಿಸಿದರು. ಒಕ್ಕೂಟಕ್ಕೆ ಸೇರಲು ಪ್ರಬಲ ಸವಾಲನ್ನು ಒಡ್ಡಿದವನು  ಹೈದರಾಬಾದಿನ ನಿಜಾಮ. ಪಟೇಲರು ನಿಜಾಮನ ನಿಲುವು ಹಾಗೂ ಧೋರಣೆಗಳನ್ನು ಉಗ್ರವಾಗಿ ಖಂಡಿಸಿದರು. ಹೈದರಾಬಾದಿನ ಹಿಂದುಗಳಿಗೆ ಈತನು ನೀಡುವ ಕಿರುಕುಳವನ್ನು ಗಂಭೀರವಾಗಿ ಪರಿಗಣಿಸಿದರು. ಪಾಕಿಸ್ತಾನದ ಪರವಾದ ಈತನ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಭಾರತ ಎಂಬ ಶರೀರದ ಉದರವೇ ಹೈದರಾಬಾದ್. ಅದನ್ನು ಕತ್ತರಿಸಲು ಬಿಡಲಾರೆ. ಅದು ಹೋದರೆ ಉಸಿರೇ ಹೋದಂತೆ. ಇದು ಪಟೇಲರ ದಿಟ್ಟ ನುಡಿ. ಕೊನೆಗೂ ಶಸ್ತ್ರ ಸಜ್ಜಿತ ಸೈನ್ಯವನ್ನು ಹೈದರಾಬಾದಿಗೆ ನುಗ್ಗಿಸಿ ನಿಜಾಮನ ಅಟ್ಟಹಾಸವನ್ನು ಕೊನೆಗಾಣಿಸಿದರು. ಈ ಸೈನಿಕ ಕಾಯರ್ಾಚರಣೆಯನ್ನು ಆಪರೇಷನ್ ಪೋಲೋ ಎಂದು ಅಂದು ಕರೆಯಲಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಸಮಸ್ಯೆ :
ಜಮ್ಮು - ಕಾಶ್ಮೀರದ ಸಮಸ್ಯೆಯ ಕುರಿತು ನೆಹರೂ ಹಾಗೂ ಪಟೇಲರು ತೆಗೆದುಕೊಂಡ ಭಿನ್ನ ನಿಲುವುಗಳು ಇಂದಿಗೂ ಚಚರ್ೆಗೊಳಗಾಗುತ್ತಿದೆ. ಒಕ್ಕೂಟ ನಿಮರ್ಾಣದ ಸಂದರ್ಭದಲ್ಲೂ ಜಮ್ಮು ಹಾಗೂ ಕಾಶ್ಮೀರ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ನೆಹರೂರವರ ಅಭಿಪ್ರಾಯಕ್ಕೆ ಪಟೇಲರ ವಿರೋಧವಿತ್ತು.  ಜುನಾಗಡವನ್ನು ವಶ ಪಡಿಸಿಕೊಂಡಂತೆ ಸೇನೆಯ ಮೂಲಕ ಜಮ್ಮು ಹಾಗೂ ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಇಂಗಿತ ಪಟೇಲರದ್ದಾಗಿತ್ತು.  ಆದರೆ ಪಟೇಲರ ಮಾತಿಗೆ ಮನ್ನಣೆ ಸಿಗಲಿಲ್ಲ. ಈ ಹೊಣೆಯನ್ನು ಪಟೇಲರ ಹೆಗಲಿನಿಂದ ಜಾರಿಸಿ ಗೋಪಾಲ ಸ್ವಾಮಿ ಅಯ್ಯಂಗಾರ್ ಎಂಬವರಿಗೆ ವಹಿಸಿಕೊಡಲಾಯಿತು. ಇದು ಪಟೇಲರಿಗೆ ನುಂಗಲಾರದ ತುತ್ತಾಯಿತು. ವಿಪರೀತ ಮುಜುಗರಕ್ಕೆ ಪಟೇಲರು ಒಳಗಾದರು. ವಿಶ್ವಸಂಸ್ಥೆಗೆ ಈ ವಿವಾದವನ್ನು ಕೊಂಡೊಯ್ಯುವ ವಿಚಾರದಲ್ಲೂ ಪಟೇಲರು ತೀವ್ರ ವಿರೋಧ ವ್ಯಕ್ತಪಡಿಸಿದರು.  ವಿಶ್ವಸಂಸ್ಥೆಗೆ ವಿವಾದ ತಲುಪಿ ಜಮ್ಮು ಹಾಗೂ ಕಾಶ್ಮೀರದ ಸಮಸ್ಯೆ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಸಮಸ್ಯೆಯಾಗಿಯೇ ಬೆಳೆಯಿತು. 
ಬಿಡದ ಬಾಂಧವ್ಯ ಬೆಸುಗೆ :
ಪಟೇಲರ ಉಕ್ಕಿನ ವ್ಯಕ್ತಿತ್ವದಲ್ಲಿ ಅಷ್ಟೇ ಪ್ರೀತಿಯೂ ತುಂಬಿತ್ತು. ದೇಶ ಹಿತಕ್ಕಾಗಿ ಭಿನ್ನಾಭಿಪ್ರಾಯಗಳು ತಲೆದೋರಬಹುದು. ಆದರೆ ಅದನ್ನೇ ದ್ವೇಷದ ರಾಜಕಾರಣಕ್ಕೆ ತಿರುಚುವ ಗುಣ ಅವರಲ್ಲಿರಲಿಲ್ಲ.  ಪಟೇಲರು ತೀವ್ರ ಅನಾರೋಗ್ಯಕ್ಕೊಳಗಾಗಿದ್ದರು. ತಮ್ಮ ಜೀವನ ಸಂಜೆಯಲ್ಲಿ ಕಾಲ ಕಳೆಯುತ್ತಿದ್ದರು. ಆಗ ಅವರನ್ನು ಭೇಟಿಯಾಗಲು ಅಂದಿನ ಸಚಿವ ವಿ.ಎನ್.ಗಾಡ್ಗಿಲ್ ಆಗಮಿಸಿದರು. ಪಟೇಲರು ಅವರಲ್ಲಿ 'ನಾನು ಬದುಕುವುದಿಲ್ಲ. ನನಗೊಂದು ವಚನ ಕೊಡು' ಎಂದರು.. ಗಾಡ್ಗಿಲರು ಏನೆಂದು ಕಾತರದಿಂದ ಕೇಳಿದಾಗ ಪಂಡಿತ್ಜೀ ಜೊತೆ ನಿನ್ನ ಭಿನ್ನಾಭಿಪ್ರಾಯ ಏನೇ ಇರಲಿ ಅವರನ್ನು ಕೈ ಬಿಡಬೇಡ.(ಮನ್ನಾರ್ ಕೃಷ್ಣ ರಾವ್ ಅವರ ಪುಸ್ತಕದಿಂದ). ಅಸ್ವಸ್ಥರಾಗಿದ್ದ ಪಟೇಲರನ್ನು ನೆಹರೂ ನೋಡಲು ಬಂದರು.  ನೆಹರೂ ಪಟೇಲರ ಸಮ್ಮುಖದಲ್ಲಿ ಆಡಿದ ಮಾತುಗಳು ಗಮನಾರ್ಹ. ನೋಡಿ ನಾವು ಮನಬಿಚ್ಚಿ ಮಾತನಾಡಬೇಕು. ನೀವು ಚಿಂತಿಸಬೇಡಿ. ನೀವು ನಿಮ್ಮ ಬಗೆಗೆ ಎಚ್ಚರ ವಹಿಸಬೇಕು ಮತ್ತು ಜಾಗೃತರಾಗಬೇಕು. (ಅದೇ ಪುಸ್ತಕದ ಸಾಲುಗಳು).
ಪಟೇಲರಿಗೆ ರಾಜಕೀಯವಾಗಿ ಯಾವುದೇ ಪ್ರತಿಷ್ಠಿತ ಮನೆತನದ ಹಿನ್ನೆಲೆಗಳಿರಲಿಲ್ಲ. ಸಂಪತ್ತಿನಲ್ಲೂ ಅಷ್ಟಕ್ಕಷ್ಟೆ. ಒಬ್ಬ ಸಾಮಾನ್ಯ ಕೃಷಿಕನ ಮಗ. ಆದರೆ ಸಂಘಟನಾ ಶಕ್ತಿ, ಅಚಲ ದೇಶಪ್ರೇಮ, ಆತ್ಮಸಾಕ್ಷಿಗನುಗುಣವಾದ ಬದುಕು ಅವರ ದೊಡ್ಡ ಆಸ್ತಿ. ಅದರಲ್ಲಿ ಅಡಗಿತ್ತು ನಾಯಕತ್ವದ ಗುಣ, ರಾಜಕೀಯ ಭಿನ್ನತೆಗಳನ್ನು ಮರೆತು ಕ್ಷಮಿಸುವ ಉದಾರತೆ.  ಅವರ ಗೌರವಾರ್ಥ ಅಪರ್ಿಸುತ್ತಿರುವ ಏಕತಾ ಪ್ರತಿಮೆ ಪಟೇಲರಿಗೆ ಸಂದ ಶಾಶ್ವತ ಗೌರವ. 
ಡಾ.ಶ್ರೀಕಾಂತ್ ಸಿದ್ದಾಪುರ.