ಬುಧವಾರ, ಸೆಪ್ಟೆಂಬರ್ 21, 2011

ಡಾ.ಕಂಬಾರ ಮತ್ತು ಪಿಪಿಸಿ

ಡಾ.ಚಂದ್ರಶೇಖರ ಕಂಬಾರ್ ಮತ್ತು ಪೂರ್ಣಪ್ರಜ್ಞ ಕಾಲೇಜು

1967-68 ರ ಕಾಲ. ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಬಿ.ಬಿ. ಪುರೋಹಿತ್  ಕೇರಳ ವಿ.ವಿ. ಗೆ ತೆರಳಿದರು. ಅವರ ಸ್ಥಾನದಲ್ಲಿ ಡಾ.ಕಂಬಾರರು ಕನ್ನಡ ಅಧ್ಯಾಪಕರಾಗಿ ನೇಮಕಗೊಂಡರು. ಆಗ ಖ್ಯಾತ ವಿಮರ್ಶಕ ಶಂಕರ್ಮೊಕಾಶಿ ಪುಣೇಕರ್ ಪ್ರಾಂಶುಪಾಲರು. 1968-69 ರ ಅವಧಿಯಲ್ಲಿ  ಡಾ.ಕಂಬಾರರು ಪುಲ್ ಬ್ರೈಟ್ ವಿದ್ಯಾಥರ್ಿವೇತನದೊಂದಿಗೆ ಅಮೆರಿಕಾಕ್ಕೆ ತೆರಳಿದರು.  ಆಗ ಪಿಪಿಸಿಯಲ್ಲಿ ನವ್ಯ ಕವಿ ಎಂ.ಗೋಪಾಲಕೃಷ್ಣ ಅಡಿಗರು ಪ್ರಾಂಶುಪಾಲರು. ಕಂಬಾರರೇ ನೆನಪಿಸಿಕೊಂಡಂತೆ ಅಡಿಗ, ಮೊಕಾಶಿಯವರೊಂದಿಗಿನ ಅಂದಿನ ಸಾಹಿತ್ಯ ಸಂಪರ್ಕ ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು.  ಕಂಬಾರರನ್ನು ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಸನ್ಮಾನಿಸಿದ್ದರು.  ಶ್ರೀಗಳಿಗೆ ಕಂಬಾರರ ಬಗ್ಗೆ ಅತೀವ ಗೌರವ.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ