ಸೋಮವಾರ, ಜೂನ್ 17, 2013

ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಶತಮಾನೋತ್ಸವ ಸಮಾರೋಪ ಸಮಾರಂಭ

 "ಶತಶ್ರೀ" ಶತಮಾನೋತ್ಸವ ಸ್ಮರಣ ಸಂಚಿಕೆಯ ಸಂಪಾದನಾ ಕಾರ್ಯದಲ್ಲಿ ಸಹಕರಿಸಿದ ಬಗ್ಗೆ ಸನ್ಮಾನ, ಶ್ರೀ ಜಯಪ್ರಕಾಶ ಹೆಗ್ಡೆ, ಸಂಸದರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರ - ಇವರಿಂದ
ಸ್ಮರಣ ಸಂಚಿಕೆ ಕುರಿತು ನಾಲ್ಕು ಮಾತುಗಳು.  ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ವಿನಯಕುಮಾರ್ ಸೊರಕೆ, ಶಾಸಕ ಪ್ರಮೋದ್ ಮಧ್ವರಾಜ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಭಾನುವಾರ, ಜೂನ್ 9, 2013

ಹ್ವಾಯ್ ಬಸ್ ಬಂತ್ ಕಾಣಿ- ಪುಸ್ತಕ

ಹ್ವಾಯ್ ಬಸ್ ಬಂತ್ ಕಾಣಿ- ಪುಸ್ತಕ  ಇದೀಗ ಪ್ರಕಟಣೆಯಲ್ಲಿದೆ. ಬಸ್ ಪ್ರಯಾಣದ ನೂರಾರು ಘಟನೆಗಳ ದಾಖಲು. ಅಲ್ಲಲ್ಲಿ ಕುಂದಗನ್ನಡದ ಸಾಲುಗಳು. ಬಸ್ಸಿನಲ್ಲಿ ಬರುವ ಹಾಸ್ಯದ ಮೇಷ್ಟ್ರು ಯಾರು?, ಅವರ ಹಾಸ್ಯದ ಶೈಲಿ, ಘಟನೆಗಳ ನಿರೂಪಕನ ದುರಂತ ಬದುಕು, ಅನುಭವಗಳನ್ನು ದಾಖಲಿಸುವ ಕನ್ನಡ  ಉಪನ್ಯಾಸಕ ಹೀಗೆ ಹಲವು ವಿಚಾರಗಳು ಮಂಜುನಾಥ ಕರಬರ ಮುನ್ನುಡಿಯೊಂದಿಗೆ. ಪ್ರಕಾಶಕರು ಮುನಿಯಾಲು ಗಣೇಶ ಶೆಣೈ, ಪುಸ್ತಕನಿಧಿ, ಗಾವಳಿ.