ಸೋಮವಾರ, ಆಗಸ್ಟ್ 8, 2011

ಹಳಗನ್ನಡ ಕಾವ್ಯ ಕಲಿಕೆ ಕಬ್ಬಿಣದ ಕಡಲೆಯೇ ?
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ.  ಕನ್ನಡಕ್ಕೆ ಈ ಸ್ಥಾನಮಾನ ದೊರಕಿಸುವಲ್ಲಿ ಶ್ರಮಿಸಿದ ಸಮಸ್ತ ಕನ್ನಡಾಭಿಮಾನಿಗಳನ್ನು ಇಲ್ಲಿ ಸ್ಮರಿಸಲೇಬೇಕು. ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ಕಾರಣ ಹಳಗನ್ನಡಕ್ಕೆ  ಇಂದು ವಿಶೇಷ ಪ್ರಾಶಸ್ತ್ಯ ಬಂದಿದೆ. ಅದರ ಅಧ್ಯಯನದತ್ತ ಒಲವು ಹೆಚ್ಚುತ್ತಿದೆ. ಆದರೆ ಹಲವರ ಪಾಲಿಗೆ ಹಳಗನ್ನಡ ಇಂದು ಕಬ್ಬಿಣದ ಕಡಲೆ. ಕೆಲವು ಅಧ್ಯಾಪಕರಿಗೂ ಅದರತ್ತ ವಕ್ರದೃಷ್ಟಿ. ವಿದ್ಯಾಥರ್ಿಗಳ ಪಾಲಿಗಂತೂ ಇದು ನೀರಿಳಿಯದ ಗಂಟಲೊಳ್ ಕಡುಂಬಂ ತುರುಂಕುವ ಪ್ರಯತ್ನ.  ಹಳಗನ್ನಡವನ್ನು ಸಮರ್ಥವಾಗಿ ವಿಶ್ಲೇಷಿಸಬಲ್ಲ ವಿದ್ವಾಂಸರ ಮತ್ತು ಪಂಡಿತರ ಕೊರತೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಅಂದಿಗಿಂತ ಇಂದು ಹೆಚ್ಚು ಬಾಧಿಸುತ್ತಿದೆ. ಅದರ ಕಲಿಕೆಯತ್ತ ಆಸಕ್ತಿಯೂ ಕುಂಠಿತವಾಗುತ್ತಿದೆ.   ಹೀಗಾಗಿ ಕನ್ನಡ ಕಲಿಕೆಯತ್ತ ಚಿಂತಿಸುವ ಕಾಲ ಈಗ ಸನ್ನಿಹಿತವಾಗಿದೆ.
ಪಠ್ಯದಲ್ಲಿ ಹಳಗನ್ನಡ ಕಾವ್ಯಗಳು :
ಹಳಗನ್ನಡದ ಕಾವ್ಯಭಾಗಗಳು ಇದೀಗ ಪಠ್ಯದಿಂದ ನಿಧಾನಕ್ಕೆ ಮರೆಯಾಗುವ ಹಂತದಲ್ಲಿದೆ. ಇದಕ್ಕೆ ಒಂದು ಕಾರಣ ವಿದ್ಯಾಥರ್ಿಗಳಿಗೆ ಸುಲಭವಾಗುವ ಪಠ್ಯಗಳ ನಿರೂಪಣೆಗೆ ನೀಡುತ್ತಿರುವ ಒತ್ತು. ಇದರೊಂದಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂಗ್ಲೀಷ್ ಭಾಷಾ ವ್ಯಾಮೋಹದ ಪ್ರವಾಹದಲ್ಲಿ ಕನ್ನಡ ಕಲಿಕೆಯನ್ನು ಹೇಗಾದರೂ ಉಳಿಸಲೇಬೇಕಾದ ಅನಿವಾರ್ಯತೆ. ಇಂದು ವಿದ್ಯಾಥರ್ಿಗಳು ಕಠಿಣವಾದ ಕನ್ನಡವನ್ನು ಆಯ್ಕೆ ಮಾಡಿಕೊಂಡು ಓದುವಲ್ಲಿ ಉತ್ಸುಕತೆ ತೋರಿಸರು. ಒಂದೊಮ್ಮೆ ಕಲಿತರೂ ಅದಕ್ಕೆ ಸೂಕ್ತ ಉದ್ಯೋಗ ಲಭ್ಯತೆಯ ಆಸೆ ಕ್ಷೀಣ.  ಅಧ್ಯಾಪಕರಿಗೂ ಹಳಗನ್ನಡ ಕಲಿಸುವಿಕೆ ಒಂದು ಸವಾಲು. ಇಲ್ಲಿರುವ ಹೆಚ್ಚಿನ ಶಬ್ದಗಳು ಸಂಸ್ಕೃತ ಭಾಷೆಯಿಂದ ಎರವಲು ಪಡೆದವು.  ಇದರಿಂದಾಗಿ ಹಳಗನ್ನಡ ಕಾವ್ಯಗಳ ಪಾಠದ ತಯಾರಿಗೆ ಅಧ್ಯಾಪಕರಿಗೆ ಹೆಚ್ಚಿನ ಸಮಯ ಅನಿವಾರ್ಯ.  ಇವುಗಳನ್ನು ಅರ್ಥಪೂರ್ಣವಾಗಿ ಕಲಿಸಬೇಕಾದರೆ ಕೇವಲ ಭಾಷಾಜ್ಞಾನವೊಂದೇ ಸಾಲದು. ಇದರೊಂದಿಗೆ ವ್ಯಾಕರಣ, ಅಲಂಕಾರ ಮತ್ತು ಛಂದಸ್ಸುಗಳ ಜ್ಞಾನವೂ ಸ್ವಲ್ಪ ಅಗತ್ಯ.  ಸಂಸ್ಕೃತ ಭಾಷೆಯಲ್ಲಿ ಕನಿಷ್ಠ ಪರಿಶ್ರಮವಿಲ್ಲದಿದ್ದರೂ ಹಳಗನ್ನಡ ಕಾವ್ಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ.  ಹಳಗನ್ನಡ ಕಾವ್ಯಗಳ ಬೋಧನೆಗೆ ತಾಳ್ಮೆ ಅತ್ಯಗತ್ಯ. ನಿಗದಿತ ಪಠ್ಯವನ್ನು ಅವಸರವಸರವಾಗಿ ಮುಗಿಸುವ ತುರಾತುರಿಗೆ ಹಳಗನ್ನಡ ಕಾವ್ಯಗಳು ಒಗ್ಗಿಕೊಳ್ಳವು. ಆದರೆ ಈಗಿನದು ಸ್ಪಧರ್ಾತ್ಮಕ ಯುಗ.  ಕಲಿಕೆಗೂ ಇದು ಅನ್ವಯಿಸುತ್ತದೆ. ಬೋಧನಾಕ್ರಮದಲ್ಲಿ ಆಮೆ ನಡಿಗೆಗೆ ಅವಕಾಶವಿಲ್ಲ. ಸೆಮಿಸ್ಟರ್ ಪದ್ಧತಿಯಲ್ಲಿ ಶೀಘ್ರವಾಗಿ ನಿಗದಿತ ಪಠ್ಯವನ್ನು ಮುಗಿಸಲೇಬೇಕು. ಕನ್ನಡ ಕಲಿಕೆಗೇ ಒಲವು ಕುಂಠಿತವಾಗುತ್ತಿರುವ ಇಂದಿನ ದಿನಗಳಲ್ಲಿ ಇಷ್ಟು ಕಷ್ಟಪಟ್ಟು ಕನ್ನಡ ಕಲಿಯುವ ಕಷ್ಟವನ್ನು ಯಾರು ತಾನೇ ಆಹ್ವಾನಿಸಿ ಕೊಳ್ಳುತ್ತಾರೆ?.   ವಿಷಯದ ಗಂಭೀರ ಅಧ್ಯಯನಕ್ಕಿಂತ ಅಂಕ ಗಳಿಕೆಗೆ ಇಂದು ಪ್ರಾಧಾನ್ಯ.  ಅಧ್ಯಯನಕ್ಕಿದ್ದ ಹಳಗನ್ನಡದ ಕಾವ್ಯಗಳ ಹೊಸಗನ್ನಡಾನುವಾದ ಓದಿಕೊಂಡರೆ  ಉತ್ತಮ ಅಂಕ ಪಡೆಯಬಹುದೆಂಬ ಭಾವನೆ ವಿದ್ಯಾಥರ್ಿಗಳಲ್ಲಿ ಬೆಳೆಯುತ್ತಿದೆ.  ಅಧ್ಯಾಪಕರ ಹಳಗನ್ನಡ ಕಾವ್ಯ ಬೋಧನೆಯ ಎಲ್ಲಾ ಕಸರತ್ತುಗಳನ್ನೂ ಬದಿಗಿಕ್ಕಿ ಕೇವಲ ಅನುವಾದಕ್ಕಾಗಿ ವಿನಂತಿಸುವುದರಲ್ಲಿಯೇ ವಿದ್ಯಾಥರ್ಿಗಳ ಶ್ರಮ.  ಕಾವ್ಯಗಳ ಒಳಹೊಕ್ಕು ರಸವನ್ನು ಆಸ್ವಾದಿಸುವ ಆಸಕ್ತಿ ಇಂದಿನ ಹಳಗನ್ನಡ ಕಾವ್ಯಗಳ ಕಲಿಕೆಯಲ್ಲಿ ಕಡಿಮೆಯಾಗುತ್ತಿದೆ. 
ಈ ಸವಾಲನ್ನು ಎದುರಿಸಬಹುದೇ ? :
1. ಕನ್ನಡ ಕಲಿಕಾ ವಾತಾವರಣ ನಿಮರ್ಾಣ :
ಈಗ ಎದುರಾಗಿರುವ ಸವಾಲನ್ನು ನಿಭಾಯಿಸಲು ಮೊದಲು ಕನ್ನಡ ಕಲಿಕೆಯತ್ತ ಆಸಕ್ತಿಯನ್ನು ಸರಕಾರ ಬೆಳೆಸಬೇಕಾಗಿದೆ. ಕನ್ನಡ ಭಾಷಾ ಬೋಧನೆಯ ವಿಚಾರದಲ್ಲಿ ಗೊಂದಲಗಳೇ ಮುಂದುವರಿಯುತ್ತಿರುವಾಗ ಕನ್ನಡದ ಬೆಳವಣಿಗೆ ಹೇಗೆ ಸಾಧ್ಯ?.  ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವುದರೊಂದಿಗೆ ಕನ್ನಡ ಕಲಿಕೆಯಿಂದಲೂ ಉದ್ಯೋಗ ಮತ್ತು ಗಳಿಕೆ ಸಾಧ್ಯ ಎಂಬ ವಾತಾವರಣವನ್ನು ನಿಮರ್ಿಸಬೇಕಾಗಿದೆ.
2. ಶಾಸ್ತ್ರ ವಿಚಾರಗಳತ್ತ ಧನಾತ್ಮಕ ಒಲವು :
ಹಳಗನ್ನಡ ಅಧ್ಯಯನಕ್ಕೆ ಪೂರಕವಾದ ಛಂದಸ್ಸು, ಅಲಂಕಾರ, ವ್ಯಾಕರಣ, ಸಂಸ್ಕೃತ ಭಾಷೆ ಮತ್ತು ಗಮಕ ಕಲೆಗಳ ಪ್ರಾಥಮಿಕ ಜ್ಞಾನವನ್ನು ಕನ್ನಡ ಬೋಧಿಸುವ ಅಧ್ಯಾಪಕರಿಗೆ ನೀಡಬೇಕು. ಅದರಲ್ಲಿ ಪಾಂಡಿತ್ಯ ಸಾಧಿಸಬೇಕೆಂಬ ಆಗ್ರಹವಲ್ಲ. ಹಳಗನ್ನಡ ಕಾವ್ಯಗಳನ್ನು  ಆಕರ್ಷಕವಾಗಿ, ಅರ್ಥಪೂರ್ಣವಾಗಿ ಕಲಿಸಲು ಪೂರಕವಾಗುವಂತೆ ಇವುಗಳ ಜ್ಞಾನ ಅತ್ಯಗತ್ಯ.
3. ಗಮಕ ಕಲೆ :
ಕನಿಷ್ಠ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಕಲಿಯುತ್ತಿರುವ  ವಿದ್ಯಾಥರ್ಿಗಳಿಗಾದರೂ ಗಮಕ ಕಲೆಯ ಪರಿಚಯ ಮಾಡಿಸಬೇಕಾಗಿದೆ. ಕನ್ನಡ ಬೋಧಿಸುವ ಅಧ್ಯಾಪಕರಿಗೆ ಈ ಕುರಿತಂತೆ ವಿಶೇಷ ತರಬೇತಿ ನೀಡಬೇಕು. ಕನರ್ಾಟಕದಲ್ಲಿರುವ ಗಮಕ ಕಲಾ ಪರಿಷತ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು.  ಆಶ್ಚರ್ಯ ಎಂದರೆ ಕನರ್ಾಟಕದಲ್ಲಿ ಹೀಗೊಂದು ಪರಿಷತ್ತು ಅಸ್ತಿತ್ವದಲ್ಲಿ ಇದೆ ಎಂಬುದೇ ಅನೇಕರಿಗೆ ತಿಳಿದಿಲ್ಲ.  ಗಮಕ ಪರಿಷತ್  ಕನರ್ಾಟಕದ ಕನ್ನಡ ಕಲಿಸುವ ಶಾಲಾ, ಕಾಲೇಜುಗಳ ಅಧ್ಯಾಪಕರೊಂದಿಗೆ ಸಂಪರ್ಕದಲ್ಲಿರಬೇಕು. ಅವರಿಗೆ ಪರಿಷತ್ತಿನ ಕಾರ್ಯಕಲಾಪಗಳ ಬಗ್ಗೆ ಆಗಾಗ ಮಾಹಿತಿ ನೀಡುತ್ತಿರಬೇಕು.  ಅದು ನಡೆಸುತ್ತಿರುವ ಪರೀಕ್ಷೆಗಳ ಬಗ್ಗೆ ತಿಳಿಸಿ, ಅದರಲ್ಲಿ ಹೆಚ್ಚಿನವರು ಹಾಜರಾಗುವಂತೆ ಉತ್ತೇಜಿಸಬೇಕು.  ಇದರೊಂದಿಗೆ ಆಗಾಗ ಕಮ್ಮಟಗಳನ್ನು ನಡೆಸುವುದರ ಮೂಲಕ ಗಮಕ ಕಲೆಯನ್ನು ಮತ್ತು ಹಳಗನ್ನಡವನ್ನು ಶಿಕ್ಷಣದಲ್ಲಿ ಉಳಿಸುವ ಪ್ರಯತ್ನ ಮಾಡಬೇಕು.
4. ಕನ್ನಡಪರವಾದ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು :
ಕನರ್ಾಟಕದಲ್ಲಿ  ಕನ್ನಡಪರವಾಗಿ ಕೆಲಸ ಮಾಡುವ ಸರಕಾರದ ಇಲಾಖೆಗಳಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರಕಾರದ ಅಧೀನದಲ್ಲಿರುವ ಅಂತಹ  ಒಂದು ಇಲಾಖೆ. ಕನ್ನಡ ಸಾಹಿತ್ಯ ಪರಿಷತ್ತೂ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಆದರೆ ಸಾಹಿತ್ಯ ಪರಿಷತ್ತು ಕೇವಲ ಸಮ್ಮೇಳನಕ್ಕಷ್ಟೇ ಸೀಮಿತವಾಗಬಾರದು. ಕನ್ನಡಾಭಿವೃದ್ಧಿ ಪ್ರಾಧಿಕಾರವು ಕನ್ನಡಾಭಿವೃದ್ಧಿಪರ ನಿರಂತರ ಚಿಂತಿಸುತ್ತಿದೆ.  ಆದರೂ ಕನ್ನಡ ಬೋಧಿಸುವ ಶಾಲಾ, ಕಾಲೇಜುಗಳೊಂದಿಗೆ ಇವುಗಳ ಸಂಬಂಧ ಇನ್ನಷ್ಟು ಹೆಚ್ಚಬೇಕಾಗಿದೆ.  ಈಗಾಗಲೇ ಹಳಗನ್ನಡ ಮತ್ತು ನಡುಗನ್ನಡದ ಕವಿಗಳ ಕಾವ್ಯಗಳ ಸಿ.ಡಿ. ಗಳು ಬಿಡುಗಡೆಯಾದ ವಿಚಾರ ಪತ್ರಿಕೆಗಳಲ್ಲಿ ಬಂದಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶದ ಜನಪ್ರಿಯ ಕ್ಯಾಸೆಟ್ ಅಂಗಡಿಗಳಲ್ಲಿ ಇವುಗಳು ಅಲಭ್ಯ. ಇದಕ್ಕೆ  ಉಳಿದ ಕ್ಯಾಸೆಟ್ಗಳಂತೆ ನಿರೀಕ್ಷಿತ ಬೇಡಿಕೆಯೂ ಇಲ್ಲ.   ಆದರೂ ಹಳಗನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಇಂತಹ ಅಮೂಲ್ಯ ಸಿ.ಡಿ. ಮತ್ತು ಉತ್ತಮ ಪುಸ್ತಕಗಳನ್ನು ಕನ್ನಡ ಬೋಧಿಸುವ ಹಳ್ಳಿಗಳ ಶಾಲಾ, ಕಾಲೇಜುಗಳಿಗೂ, ಸಾಹಿತ್ಯಾಸಕ್ತರಿಗೂ  ಸುಲಭವಾಗಿ ಲಭಿಸುವಂತೆ ಈ ಸಂಸ್ಥೆಗಳು ಅಥವಾ ಇಲಾಖೆಗಳು ನೋಡಿಕೊಳ್ಳಬೇಕು.
 ಈ ಎಲ್ಲಾ ತೊಡರುಗಳ ನಡುವೆಯೂ ಹಳಗನ್ನಡದ ಸಂಶೋಧನೆ ಮತ್ತು ಅಧ್ಯಯನದತ್ತ ಸಂಕಿರಣಗಳು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಶಾಲೆ ಮತ್ತು ಕಾಲೇಜುಗಳಲ್ಲಿನ ಕನ್ನಡ ಕಲಿಕೆಗೆ ಮೇಲಿನಂತೆ ಬದಲಾವಣೆ ತರುವುದರ ಮೂಲಕ ಈ ಮತ್ತೊಮ್ಮೆ ಆಸಕ್ತಿಯನ್ನು ಕುದುರಿಸಬಹುದೇ ?. ಹಳಗನ್ನಡವನ್ನು ಉಳಿಸಬಹುದೇ ?.
      ಡಾ.ಶ್ರೀಕಾಂತ್ ಸಿದ್ದಾಪುರ
 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ