ಶುಕ್ರವಾರ, ಫೆಬ್ರವರಿ 18, 2011

Article on Holeshankaranarayana

ಪ್ರಶಾಂತ ಪರಿಸರದ ಶ್ರೀ ಕ್ಷೇತ್ರ ಹೊಳೆಶಂಕರನಾರಾಯಣ
ಶ್ರೀ ಶಂಕರನಾರಾಯಣ ಕ್ಷೇತ್ರದ ಹೆಸರನ್ನು ಕೇಳದವರೇ ವಿರಳ. ಶಂಕರ ಮತ್ತು ನಾರಾಯಣರು ಒಂದೇ ದೇಹದಿಂದ ಅವತಾರ ತಾಳಿದುದು ಇಲ್ಲಿನ ವೈಶಿಷ್ಟ್ಯ.  ಶಂಕರನಾರಾಯಣ ಎಂದಾಕ್ಷಣ ತಟ್ಟನೆ ನಮ್ಮ ಗಮನಕ್ಕೆ ಬರುವುದು ಪ್ರಸಿದ್ಧ ಕ್ಷೇತ್ರ ಶ್ರೀ ಕ್ರೋಢ ಶಂಕರನಾರಾಯಣ.  ಶ್ರೀ ಶಂಕರನಾರಾಯಣ ದೇವರಿಗೆ ಸಂಬಂಧಿಸಿದ ಇನ್ನೂ ನಾಲ್ಕು ಕ್ಷೇತ್ರಗಳು ಈ ಪರಿಸರದಲ್ಲಿದ್ದು, ಅವುಗಳ ಇತಿಹಾಸವು ಬೆಳಕಿಗೆ ಬರಬೇಕಾಗಿದೆ. ಈ ನಾಲ್ಕರಲ್ಲಿ ಒಂದಾದ ಸಿದ್ದಾಪುರ ಸಮೀಪದ ಹೊಳೆಶಂಕರನಾರಾಯಣವು ಇದೀಗ ಭಕ್ತರ ಗಮನವನ್ನು ಹೆಚ್ಚು ಸೆಳೆಯುತ್ತಿದೆ. ಅಗಸ್ತ್ಯರ ತಪೋಭೂಮಿ ಎಂಬ ಪಾವಿತ್ರ್ಯವೂ ಈ ಸ್ಥಳಕ್ಕಿದೆ.
ಕ್ಷೇತ್ರವಿರುವ ಪ್ರದೇಶ:
ಹೊಳೆಶಂಕರನಾರಾಯಣವು ಸಿದ್ದಾಪುರದಿಂದ ವಾರಾಹಿ ಯೋಜನಾ ಪ್ರದೇಶಕ್ಕೆ ಹೋಗುವ ಮಾರ್ಗದಲ್ಲಿದೆ. ಕುಂದಾಪುರ ತಾಲೂಕಿನ ಸಿದ್ದಾಪುರದಿಂದ ಸುಮಾರು 5 ಕಿ.ಮೀ. ದೂರದಲ್ಲಿದೆ.  ಕ್ಷೇತ್ರದ ಸುತ್ತಲೂ ಹಸಿರು ಕಾನನ ಮನಸ್ಸಿಗೆ ಮುದನೀಡುತ್ತದೆ. ತುಂಬಿ ಹರಿಯುವ ನದಿ ಇನ್ನೊಂದು ಆಕರ್ಷಣೆ.  ಜನಜಂಗುಳಿಯಿಂದ ದೂರವಿರುವ ಈ ಪ್ರದೇಶದ ಪ್ರಶಾಂತ ವಾತಾವರಣ ಎಂಥವರ ಮನಸ್ಸನ್ನೂ ಶಾಂತಗೊಳಿಸುತ್ತದೆ. ಇಲ್ಲೇ ಸಮೀಪದಲ್ಲಿ ಕನರ್ಾಟಕ ಸರಕಾರದ ಬಹು ಬೇಡಿಕೆಯ ವಾರಾಹಿ ನೀರಾವರಿ ಯೋಜನೆಯ ಕಾರ್ಯವೂ ನಡೆಯುತ್ತಿದೆ.
ಪೌರಾಣಿಕ ಹಿನ್ನೆಲೆ :
ಖರ ಮತ್ತು ರಟ್ಟಾಸುರರ ಅಟ್ಟಹಾಸಕ್ಕೆ ಮಂಗಳ ಹಾಡಲು ಹರಿ ಮತ್ತು ಹರರನ್ನು ಒಂದೇ ದೇಹಧಾರಿಗಳಾಗಿ  ಧರೆಗಿಳಿಸಬೇಕಾಯಿತು.  ಈ ಮಹತ್ಕಾರ್ಯದಲ್ಲಿ ಕ್ರೋಢ ಮಹಷರ್ಿಗಳೊಂದಿಗೆ ನಾಲ್ವರು ಮುನಿಗಳಾದ ಜಮದಗ್ನಿ, ಲೋಮಶ, ಮಾಂಡವ್ಯ ಮತ್ತು ಅಗಸ್ತ್ಯರೂ ಬೇರೆ ಬೇರೆ ಪ್ರದೇಶಗಳಲ್ಲಿ ತಪಸ್ಸನ್ನು ಕೈಗೊಂಡರು. ಅಗಸ್ತ್ಯರು ಆರಿಸಿಕೊಂಡ ಏಕಾಂತ ಸ್ಥಳವೇ ಹೊಳೆಶಂಕರನಾರಾಯಣ.  ಅಗಸ್ತ್ಯರು ಸಂಕರ್ಷಣಾತ್ಮಕನಾದ ಅಘೋರನನ್ನು ಕುರಿತು ಘೋರ ತಪಸ್ಸನ್ನು ಮಾಡಿದರು. ಈ ಐವರ ತಪಸ್ಸಿಗೆ ಮೆಚ್ಚಿದ ಹರಿ ಮತ್ತು ಹರರು ಒಂದಾಗಿ ಐವರಿಗೂ ಕಾಣಿಸಿಕೊಂಡರು. ಇವರ  ಬೇಡಿಕೆಯಂತೆ ಖರ ಮತ್ತು ರಟ್ಟಾಸುರರನ್ನು ಕೊಂದರು. ಮುನಿಗಳೈವರ ಅಪೇಕ್ಷೆಯಂತೆ ಅವರು ತಪಸ್ಸು ಮಾಡಿದ ಐದೂ ಸ್ಥಳಗಳಲ್ಲಿ ಶಂಕರನಾರಾಯಣರು ನೆಲೆ ನಿಂತರು.  ಈ ಐದು ಶಂಕರನಾರಾಯಣಗಳೇ ಕ್ರೋಢ ಶಂಕರನಾರಾಯಣ, ಹೊಳೆಶಂಕರನಾರಾಯಣ, ಮಾಂಡವಿ ಶಂಕರನಾರಾಯಣ, ಬೆಳ್ವೆ ಶಂಕರನಾರಾಯಣ ಮತ್ತು ಆವಸರ್ೆ ಶಂಕರನಾರಾಯಣ.
ಐತಿಹಾಸಿಕ ಹಿನ್ನೆಲೆ :
ಹೊಳೆಶಂಕರನಾರಾಯಣವು ಐತಿಹಾಸಿಕವಾಗಿಯೂ ಗಮನ ಸೆಳೆಯುತ್ತಿದೆ. ಕೆಳದಿ ಅರಸರ ಕಾಲದ ಶಾಸನವೊಂದರಲ್ಲಿ ಈ ಕ್ಷೇತ್ರದ ಉಲ್ಲೇಖವಿದೆ. ಶಾಸನದ ಪ್ರಕಾರ ಈ ಕ್ಷೇತ್ರವು ಬೇಚಹಳ್ಳಿ (ಇಂದಿನ ಬೆಚ್ಚಳ್ಳಿ) ಗ್ರಾಮದಲ್ಲಿದೆ. ಕೆಳದಿ ಅರಸನಾದ ವೀರಭದ್ರ ನಾಯಕನು 1642 ರಲ್ಲಿ ಈ ದೇವಸ್ಥಾನದ ಅರ್ಚನೆಯ ವೆಚ್ಚಕ್ಕೆ ಉಂಬಳಿ ಬಿಟ್ಟ ಉಲ್ಲೇಖ ಈ ಶಾಸನದಲ್ಲಿದೆ.
ಹೊಳೆಶಂಕರನಾರಾಯಣ ಕ್ಷೇತ್ರದ ಕಳೆಯನ್ನು ಹೆಚ್ಚಿಸಿದವರು ಡಾ.ಜಿ.ಶಂಕರ್. ಅವರ ಮುಂದಾಳತ್ವದಲ್ಲಿ ಜೀಣರ್ೋದ್ಧಾರಗೊಂಡಿರುವ ಈ ಕ್ಷೇತ್ರವು ಇನ್ನಷ್ಟು ಭಕ್ತರನ್ನು ಸೆಳೆಯುವಂತಾದರೆ ಪರಿಶ್ರಮ ಸಾರ್ಥಕವಾದೀತು. ಹಾಗಾಗಲಿ ಎಂದು ಆಶಿಸೋಣ.            

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ