ಗುರುವಾರ, ಫೆಬ್ರವರಿ 17, 2011

swami vivekananda



ವಿಶಿಷ್ಟಗುಣಗಳ ವಿಭೂತಿಪುರುಷ ವಿವೇಕಾನಂದ
 ರಾಮಕೃಷ್ಣ ಪರಮಹಂಸರ ಭಕ್ತರಾಗಿದ್ದ ಬಾಬು ಬಲರಾಮ ಮತ್ತು ಬಾಬು ಸುರೇಂದ್ರನಾಥರು ಅಕಾಲದಲ್ಲಿ ದೈವಾಧೀನರಾಗುತ್ತಾರೆ. ಈ ವಾತರ್ೆಯು ಪರಮಹಂಸರ ಪಟ್ಟದ ಶಿಷ್ಯರಾಗಿದ್ದ ಸಂತರಿಗೂ ತಲುಪುತ್ತದೆ.  ಅಗಲಿದ ಇಬ್ಬರು ಶ್ರೇಷ್ಠ ಭಕ್ತರಿಗಾಗಿ ಆ ಸಂತ ಕಣ್ಣೀರು ಸುರಿಸುತ್ತಾರೆ. ಅವರೊಂದಿಗಿದ್ದ ಇತರರು ಆಶ್ಚರ್ಯದಿಂದ ಸ್ವಾಮೀಜಿಯವರನ್ನು ಪ್ರಶ್ನಿಸುತ್ತಾರೆ. ಸ್ವಾಮಿ ಸಾಧುವಾದ ನಿಮಗೂ ಈ ಪರಿ ಕಣ್ಣೀರೇ?.  ಈ ಪ್ರಶ್ನೆಗೆ ಸಂತನ ಉತ್ತರ ಹೀಗಿತ್ತು. ಸಂನ್ಯಾಸಿಯಾದ ಮಾತ್ರಕ್ಕೆ ಹೃದಯವಿಲ್ಲವೇ ?. ನಿಜವಾದ ಸಂನ್ಯಾಸಿ ಇತರರಿಗಾಗಿ ಹೆಚ್ಚು ಮರುಗುವನು.
 ಈ ರೀತಿಯಾಗಿ  ಮರುಗಿದ ಯತಿಗಳೇ ಮಾನವೀಯತೆಗೆ ಒತ್ತುಕೊಟ್ಟು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ವೀರ ಸಂತ ವಿವೇಕಾನಂದರು.  1863 ಜನವರಿ 12 ರಂದು ವಿವೇಕಾನಂದರ ಜನನವಾಯಿತು. ಕಲ್ಕತ್ತಾದಲ್ಲಿನ ವಕೀಲ ವಿಶ್ವನಾಥ ದತ್ತ ಮತ್ತು ಭುವನೇಶ್ರರಿ ದೇವಿಯವರು ಸ್ವಾಮೀಜಿಯವರ ತಂದೆ, ತಾಯಿಯವರು.  ಅಜ್ಜ ದುಗರ್ಾಚರಣದಾಸರು ಆಗರ್ಭ ಶ್ರೀಮಂತಿಕೆಯ ನಡುವೆಯೇ ವೈರಾಗ್ಯವನ್ನು ಒಪ್ಪಿ ಸಂನ್ಯಾಸ ಸ್ವೀಕರಿಸಿದವರು.  ಬಾಲ್ಯದಿಂದಲೇ ಸ್ವಾಮೀಜಿಯವರಲ್ಲಿ ಮಾನವೀಯ ಗುಣಗಳ ಅಂಕುರವಾಗತೊಡಗಿತ್ತು. ಅವರೇ ಒಂದು ಕಡೆ ಇದನ್ನು ಸ್ಮರಿಸಿಕೊಳ್ಳುತ್ತಾರೆ. ಅವರು ಬಾಲ್ಯದಲ್ಲಿದ್ದಾಗ ಒಬ್ಬ ಬಾಲಕ ಗಾಡಿಯೊಂದರ ಚಕ್ರದಡಿ ಸಿಲುಕಿ ಸಾಯುವ ಅಪಾಯದಲ್ಲಿ ಇದ್ದಿದ್ದನಂತೆ. ಸ್ವಾಮಿ ವಿವೇಕಾನಂದರು ಅಂದರೆ ಅಂದಿನ ನರೇಂದ್ರ ಧೈರ್ಯದಿಂದ ಬಾಲಕನ ಪ್ರಾಣವನ್ನು ಉಳಿಸಿದರಂತೆ. ಒಮ್ಮೆ ಒಬ್ಬ ಬಡ ಹುಡುಗ ರಸ್ತೆಯ ಬದಿ ವಿಪರೀತ ಜ್ವರದಿಂದ ನರಳುತ್ತಿದ್ದನು. ಅದನ್ನು ಗಮನಿಸಿದ ನರೇಂದ್ರ ಆ ಬಾಲಕನನ್ನು ಮನೆಯ ತನಕ ತಲುಪಿಸಿದರು.  ಮಾನವೀಯತೆ ಮತ್ತು ಧ್ಯರ್ಯಗಳೇ ನರೇಂದ್ರನ ಯಶಸ್ಸಿನ ಬಂಡವಾಳವಾಗಿದ್ದವು. ಅವರೇ ಒಂದು ಕಡೆ ತನ್ನೀ ಗುಣಗಳ ಕುರಿತು ಆಡಿ ಕೊಂಡಿರುತ್ತಾರೆ. ಈ ವಿಧದ ಧೈರ್ಯವಿಲ್ಲದಿದ್ದರೆ ಕಾಸಿಲ್ಲದೇ ಕಡಲನ್ನು ದಾಟಲು ಸಾಧ್ಯವಾಗುತ್ತಿತ್ತೇ?. ಭಿಕಾರಿಯಾಗಿ ಭೂಪ್ರದಕ್ಷಿಣೆ ಬರಲು ಸಾಧ್ಯವಾಗುತ್ತಿತ್ತೇ?.
ನರೇಂದ್ರನ ಬಾಲ್ಯ :
ಬಾಲ್ಯದಲ್ಲಿರುವಾಗ ವಿಶ್ವನಾಥ ದತ್ತರು ಮಗನಿಗೆ ಒಂದು ಮಾತನ್ನು ಹೇಳುತ್ತಿದ್ದರು. ಎಂದಿಗೂ ದರ್ಪಕ್ಕೆ ಮಣಿಯಬೇಡ. ಯಾವುದಕ್ಕೂ ಅದ್ಭುತ ಅಥವಾ ವಿಸ್ಮಯ ಎಂದು ಅತಿಯಾದ ಆದರ ತೋರಬೇಡ. ತಂದೆಯ ಈ ಹಿತನುಡಿಯೇ ಬಾಲಕ ನರೇಂದ್ರನಲ್ಲಿ ಈ ಧೈರ್ಯವನ್ನು ತುಂಬಿತು.  ತಾಯಿ ಭುವನೇಶ್ವರಿ ದೇವಿ ಮಗನಿಗೆ ಭಾರತದ ವೀರ ಪುರುಷರ ಕತೆಗಳನ್ನು ಹೇಳುತ್ತಿದ್ದಳು. ವಿವೇಕಾನಂದರ ತಂದೆಯಾದರೂ ಸಾಕಷ್ಟು ಶ್ರೀಮಂತರು. ಮನೆಗೆ ಬಂದ ಸಾಧು, ಸಂತರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದರು. ಅವರಿಗೆ ದಾನ ಮತ್ತು ಧರ್ಮಗಳನ್ನು ಮಾಡುವುದರಲ್ಲಿಯೂ ಹಿಂದೇಟು ಹಾಕುತ್ತಿರಲಿಲ್ಲ. ಕುಟುಂಬದ ಈ ಹಿನ್ನೆಲೆಗಳೇ ಬಾಲಕ ನರೇಂದ್ರನ ಮೇಲೆ ಪ್ರಭಾವ ಬೀರಿದವು.
ರಾಮಕೃಷ್ನರ ಭೇಟಿ :
 ತಂದೆ ವಿಶ್ವನಾಥ ದತ್ತರಿಗೆ ಮಗನನ್ನು ವಕೀಲನನ್ನಾಗಿ ಮಾಡುವ ಉತ್ಸಾಹ. ಆದರೆ ನರೇಂದ್ರನಿಗೆ ಅಧ್ಯಾತ್ಮದತ್ತ ಅಧಿಕ ಒಲವು. ಯೋಗ, ಧ್ಯಾನ, ಸಮಾಧಿ ಎಂದರೆ ರೋಮಾಂಚನ. ತನ್ನ ಅಧ್ಯಾತ್ಮತೃಷೆಯನ್ನು ನೀಗಿಸಬಲ್ಲ ಗುರುವಿನ ಹುಡುಕಾಟದಲ್ಲಿ ನರೇಂದ್ರನು ಇದ್ದನು. ಈ ಸಂದರ್ಭದಲ್ಲಿ ಆತನ ಕಿವಿಯ ಮೇಲೆ ಬಿದ್ದ ಹೆಸರು ದಕ್ಷಿಣೇಶ್ವರದ ರಾಮಕೃಷ್ಣ ಪರಮಹಂಸರು. ಒಮ್ಮೆ ಕಾಲೇಜಿನಲ್ಲಿ ಇಂಗ್ಲೀಷ್ ತರಗತಿ ನಡೆಯುತ್ತಿತ್ತು. ಹೇಸ್ಟಿ ಎಂಬ ಇಂಗ್ಲೀಷ್ ಅಧ್ಯಾಪಕರು ಅಂದು ಪಾಠ ಮಾಡುತ್ತಿದ್ದರು. ಪಾಠದ ವಿಷಯ ವಡ್ಸರ್್ವತರ್್ ಕವಿಯ ದಿ ಎಕ್ಸ್ಕರ್ಷನ್ ಕವನ. ಈ ಕವನದ ಹಿನ್ನೆಲೆಯಲ್ಲಿ ಭಾವಾತೀತ ಸಮಾಧಿಯ ಕುರಿತು ವಿವರಿಸುತ್ತಾ ಸಾಗಿದ ಅಧ್ಯಾಪಕರು ರಾಮಕೃಷ್ಣ ಪರಮಹಂಸರಲ್ಲಿ ಈ ಸಮಾಧಿ ಸ್ಥಿತಿಯನ್ನು ಕಾಣಬಹುದು ಎಂದರು. ಅಂದಿನಿಂದ ರಾಮಕೃಷ್ಣರತ್ತ ವಿಶೇಷ ಗೌರವ ತಾಳಿದ ನರೇಂದ್ರನು 1881 ರಲ್ಲಿ ದಕ್ಷಿಣೇಶ್ವರಕ್ಕೆ ಬಂದು ರಾಮಕೃಷ್ಣರನ್ನು ಭೇಟಿ ಮಾಡಿದನು.
ಗುರು-ಶಿಷ್ಯರ ಸಮಾಗಮ :
 ವಿವೇಕಾನಂದರು ಯಾವುದನ್ನೂ ಸುಲಭದಲ್ಲಿ ಒಪ್ಪಿಕೊಳ್ಳುವವರಲ್ಲ. ರಾಮಕೃಷ್ಣರನ್ನೂ ಅವರು ಧೈರ್ಯದಿಂದಲೇ ಪ್ರಶ್ನಿಸುತ್ತಾರೆ. ನೀವು ದೇವರನ್ನು ನೋಡಿದ್ದೀರಾ?. ರಾಮಕೃಷ್ಣರು ಅಷ್ಟೇ ಧೈರ್ಯದಿಂದ ಉತ್ತರ ಕೊಡುತ್ತಾರೆ. ಹೌದು, ನೋಡಿದ್ದೇನೆ.  ಈ ತನಕ ತನ್ನ ಪ್ರಶ್ನೆಗೆ ಇಷ್ಟು ಧೈರ್ಯವಾಗಿ ಉತ್ತರ ಕೊಟ್ಟ ಸಂತರನ್ನು ವಿವೇಕಾನಂದರು ನೋಡಿರಲಿಲ್ಲ. ರಾಮಕೃಷ್ಣರಿಗೆ ಕಾಂಚನ ಮತ್ತು ಕಾಮಿನಿಯರತ್ತ ನಿರಾಸಕ್ತಿ.  ಮಣ್ಣನ್ನೂ, ಹೊನ್ನನ್ನೂ ಸಮಾನವಾಗಿ ಕಾಣುತ್ತಿದ್ದರು. ವಿವೇಕಾನಂದರಿಗೆ ಇದರ ಸತ್ಯಾಸತ್ಯತೆ ತಿಳಿಯುವ ಕುತೂಹಲ. ಅದಕ್ಕಾಗಿ ಗುರುವನ್ನೂ ಪರೀಕ್ಷೆಗೆ ಗುರಿಪಡಿಸಿದರು.  ಅವರು ವಿಶ್ರಮಿಸುವ ಹಾಸಿಗೆಯ ಅಡಿ ಒಂದೆರಡು  ಬಂಗಾರದ ನಾಣ್ಯಗಳನ್ನಿಟ್ಟರು. ರಾಮಕೃಷ್ಣರು ಬಂದವರೇ ಹಾಸಿಗೆಯ  ಮೇಲೆ ಕುಳಿತರು. ವಿವೇಕಾನಂದರು ದೂರದಲ್ಲಿ ನಿಂತು ಕುತೂಹಲದಿಂದ ಎಲ್ಲವನ್ನೂ ಗಮನಿಸುತ್ತಿದ್ದರು. ರಾಮಕೃಷ್ಣರಿಗೆ ಚೇಳು ಕಡಿದ ಅನುಭವವಾಯಿತು. ಅವರು ಎದ್ದೆದ್ದು ನಿಲ್ಲುತ್ತಿದ್ದರು. ಕೊನೆಗೆ ಈ ಬಂಗಾರವು ಇದ್ದ ಸಂಗತಿ ತಿಳಿಯಿತು. ವಿವೇಕಾನಂದರು ತಮ್ಮನ್ನು ಪರೀಕ್ಷಿಸಲು ತಾನೇ ಈ ಕೆಲಸ ಮಾಡಿದೆನೆಂದು ಸತ್ಯವನ್ನು ಅನಂತರ ಬಿಚ್ಚಿಟ್ಟರು. ರಾಮಕೃಷ್ಣ ಪರಮಹಂಸರಿಗೂ ಸಂತೋಷವಾಯಿತು.
ರಾಜಾ ಮಂಗಳಸಿಂಗರಿಗೆ ಮುಖಭಂಗ ;
 ಭಾರತದ ಸಮಗ್ರವಾದ ಪರಿಚಯಕ್ಕೆ ಸ್ವಾಮೀಜಿ ಆಯ್ದುಕೊಂಡ ಹಾದಿ ಭಾರತ ಪರ್ಯಟನ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಪ್ರವಾಸ ಕೈಗೊಂಡ ಸ್ವಮೀಜಿಯವರು ಈ ದೇಶದ ಜನ ಜೀವನವನ್ನು ಸಂಪೂರ್ಣವಾಗಿ ಅರಗಿಸಿಕೊಂಡರು. ವಿವೇಕಾನಂದರು ಹೀಗೆ ಪ್ರವಾಸದಲ್ಲಿದ್ದಾಗ ರಾಜಾ ಮಂಗಳಸಿಂಗನನ್ನು ಅವನ ದಿವಾನರ ಮೂಲಕ ಒಮ್ಮೆ ಭೇಟಿಯಾದರು. ಮಂಗಳಸಿಂಗನು ಬ್ರಿಟಿಷರೊಂದಿಗೆ ಕೈಜೋಡಿಸಿ, ಪಾಶ್ಚಾತ್ಯ ಸಂಸ್ಕೃತಿಯನ್ನು ಅತಿಯಾಗಿ ಕೊಂಡಾಡುತ್ತಿದ್ದನು. ಸ್ವಾಮೀಜಿಯವರಿಂದಾದರೂ ರಾಜನ ಮನ:ಪರಿವರ್ತನೆಯಾಗಲಿ ಎಂಬ ಬಯಕೆ ಅವನ ದಿವಾನರದ್ದು.  ಸ್ವಾಮೀಜಿಯವರನ್ನು ಕಂಡ ಕೂಡಲೇ ಮಂಗಳಸಿಂಗನು ಅಹಂಕಾರದಿಂದ ಪ್ರಶ್ನಿಸಿದನು.  ಎಲ್ಲವನ್ನೂ ಬಿಟ್ಟು ನೀವು ಯಾಕೆ ಈ ಸಂನ್ಯಾಸವನ್ನು  ಸ್ವೀಕರಿಸಿದಿರಿ?. ವಿವೇಕಾನಂದರ ಉತ್ತರವೂ ಅಷ್ಟೇ ತೀಕ್ಷ್ಣವಾಗಿತ್ತು. ಅಮೂಲ್ಯವಾದ ಭಾರತೀಯ ಸಂಸ್ಕೃತಿಯನ್ನು ಬಿಟ್ಟು ನೀವು ಪಾಶ್ಚಾತ್ಯರ ಗುಲಾಮರಾಗಿ ಬ್ರಿಟಿಷರೊಂದಿಗೆ ಏಕೆ ಕೈ ಜೋಡಿಸುತ್ತಿದ್ದೀರಿ?. ಒಮ್ಮೆ ಮಂಗಳಸಿಂಗರು ಸ್ವಾಮೀಜಿಯವರ ಮುಂದೆ ಮೂತರ್ಿಪೂಜೆಯನ್ನು ಖಂಡಿಸಿ ಮಾತನಾಡಿದರು. ಕೂಡಲೇ ಸ್ವಾಮೀಜಿ ಅಲ್ಲೆ ಇದ್ದ ಮಂಗಳಸಿಂಗರ ಭಾವಚಿತ್ರಕ್ಕೆ ಉಗುಳುವಂತೆ ಅರಮನೆಯ ಸಿಬ್ಬಂದಿಗಳಿಗೆ ಆದೇಶಿದರು. ಎಲ್ಲರೂ ತಬ್ಬಿಬ್ಬಾದರು. ಕೊನೆಗೆ ವಿವೇಕಾನಂದರು ಹೇಳಿದರು. ಅಲ್ಲಿ ನಿಮ್ಮ ರಾಜನಿಲ್ಲ. ಅದು ಅವನ ಭಾವಚಿತ್ರ. ಆದರೆ ಅದರಲ್ಲಿಯೇ  ನೀವು ನಿಮ್ಮ ರಾಜನನ್ನು ಕಾಣುತ್ತಿರುವಿರಿ. ಮೂತರ್ಿಪೂಜೆಯ ಮರ್ಮವೂ ಇಷ್ಟೇ. ಅದು ಅವರವರ ಭಾವಕ್ಕೆ ಬಿಟ್ಟ ವಿಚಾರ.
ಸರ್ವಧರ್ಮ ಸಮ್ಮೇಳನ :
 1893 ಸೆಪ್ಟೆಂಬರ್ 11 ಚಿಕಾಗೋ ನಗರದಲ್ಲಿ ವಿಶ್ವಧರ್ಮ ಸಮ್ಮೇಳನ.  ಈ ಸಮ್ಮೇಳನದಲ್ಲಿ ಸ್ವಾಮೀಜಿಯವರ ವಾಕ್ವೈಖರಿ ಎಲ್ಲರನ್ನೂ ಬೆಕ್ಕಸ ಬೆರಗು ಮಾಡಿತು. ಮುಂದೆ ಅಲ್ಲಿಯೇ ಇದ್ದ ಶ್ರೀಮಂತರೊಬ್ಬರಿಂದ ಸ್ವಾಮೀಜಿಯವರಿಗೆ ಆಹ್ವಾನವೂ ಬಂದಿತು. ಅ ಶ್ರೀಮಂತರ ಮನೆಯಲ್ಲಿ ಹಂಸತೂಲಿಕಾತಲ್ಪದಲ್ಲಿ ಮಲಗುವ ಅವಕಾಶವನ್ನು ಸ್ವಾಮೀಜಿಯವರಿಗೆ ಕಲ್ಪಿಸಲಾಯಿತು.  ಆ ಕ್ಷಣವೇ ಭಾರತದ ಬಡಜನರ  ದೀನ ಸ್ಥಿತಿ ಅವರ ಕಣ್ಮುಂದೆ  ಬಂದು ನಿಂತಿತು.  ಅವರಿಗರಿವಿಲ್ಲದೇ ಕಣ್ಣೀರು ಸುರಿಯಿತು. ಭಾರತವನ್ನು ಈ ಬಡತನದ ಶಾಪದಿಂದ ಪಾರುಮಾಡು ಎಂದು ತಾಯಿಯನ್ನು ಅಲ್ಲೇ ಪ್ರಾಥರ್ಿಸಿದರು. ಅದು ಅವರ ಪಾಲಿಗೆ ಸುಖದ ಸುಪ್ಪತ್ತಿಗೆಯಾಗುವ ಬದಲು ಮುಳ್ಳಿನ ಹಾಸಿಗೆಯಂತಾಯಿತು. ಕೊನೆಗೂ ಆ ವೈಭವದ ಹಂಸತೂಲಿಕಾತಲ್ಪವನ್ನು ತ್ಯಜಿಸಿದರು.
ಯುವಕರ ಮೇಲೆ ಅತಿ ವಿಶ್ವಾಸ :
 ಸ್ವಾಮೀಜಿಯವರಿಗೆ ದೇಶದ ಯುವಕರ ಮೇಲೆ ಅತಿಯಾದ ನಂಬಿಕೆ ಇದ್ದಿತ್ತು. ತರುಣ ಸ್ನೇಹಿತರೇ, ಮೊದಲು ಬಲಿಷ್ಠರಾಗಿ. ಗೀತಾಧ್ಯಯನಕ್ಕಿಂತ ಫುಟ್ಬಾಲ್ ಆಟದಿಂದ ಮುಕ್ತಿಗೆ ಹತ್ತಿರ ಹೋಗುವಿರಿ. ಇವು ಕೆಚ್ಚಿನ ಮಾತುಗಳು. ನಿಮ್ಮ ಬಾಹುಗಳ ಮಾಂಸಖಂಡಗಳಲ್ಲಿ ಸ್ವಲ್ಪ ಹೆಚ್ಚು ಶಕ್ತಿ ಇದ್ದರೆ, ನೀವು ಗೀತೆಯನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಬಲ್ಲಿರಿ
ಜನವರಿ 12, ರಾಷ್ಟ್ರೀಯ ಯುವದಿನವನ್ನಾಗಿ  ಆಚರಿಸಲಾಗುತ್ತಿದೆ. ಸ್ವಾಮೀಜಿಯವರ ಚಿಂತನೆ, ಸಂದೇಶಗಳ ಮಂಥನ ಇಂದು ಹೆಚ್ಚು ಪ್ರಸ್ತುತ.  ಈ ಹಿನ್ನೆಲೆಯಿಂದ ಅರ್ಥಪೂರ್ಣವಾಗಿ ಸ್ವಾಮೀಜಿಯವರ ಜಯಂತಿ ಆಚರಿಸಲ್ಪಡಲಿ.
     ಡಾ.ಶ್ರೀಕಾಂತ್ಸಿದ್ದಾಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ