ಮಂಗಳವಾರ, ಫೆಬ್ರವರಿ 8, 2011

Ashwini chidananda Shetty

ಚಿನ್ನದಾನಂದ ತಂದ  ಅಕ್ಕುಂಜೆ ಅಶ್ವಿನಿ ಚಿದಾನಂದ ಶೆಟ್ಟಿ
ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಅಕ್ಕುಂಜೆ ಜನ್ಸಾಲೆ ಸಮೀಪದ ಚಿಕ್ಕ ಹಳ್ಳಿ. ಇಲ್ಲಿನ ಅಕ್ಕುಂಜೆ ಮನೆತನ ಈ ಪರಿಸರದಲ್ಲಿ ಹೆಸರುವಾಸಿ. ಶೈಕ್ಷಣಿಕ, ಸಾಮಾಜಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಇಲ್ಲಿನ ಗಣ್ಯರು ತಮ್ಮನ್ನು ತೊಡಗಿಸಿಕೊಂಡವರು. ಇಂತಹ ಮನೆತನದಲ್ಲಿ ಹುಟ್ಟಿದವಳು ದೇಶಕ್ಕೆ ಮೂರು ಸ್ವರ್ಣತಂದ ಅಶ್ವಿನಿ ಚಿದಾನಂದ ಶೆಟ್ಟಿ.
ಕೌಟುಂಬಿಕ ಹಿನ್ನೆಲೆ :
ಅಶ್ವಿನಿಯ ತಂದೆ ಚಿದಾನಂದ ಶೆಟ್ಟಿ, ತಾಯಿ ಯಶೋಧ.  ಈಕೆಯ ಅಕ್ಕ ದೀಪ್ತಿ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅಣ್ಣ ಅಮಿತ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯಮಿ. ಮೂಲತ: ಕೃಷಿ ಕುಟುಂಬ. ಈ ಕುಟುಂಬದವರು ಹಿಂದಿನಿಂದಲೂ ಕ್ರೀಡೆ ಮತ್ತು ಕಲೆಗಳಲ್ಲಿ ಆಸಕ್ತರು. ಈಕೆಯ ಅಜ್ಜ ಸುಬ್ಬಣ್ನ ಶೆಟ್ಟಿಯವರು ಕೃಷಿಯನ್ನು ಆಳವಾಗಿ ಪ್ರೀತಿಸಿದವರು. ಇದರೊಂದಿಗೆ ದಾಸ ಕೀರ್ತನನೆಗಳಲ್ಲಿ ಅಪಾರ ಗೌರವ. ಭಜನೆ ಇವರ ಒಂದು ಪ್ರಮುಖ ಹವ್ಯಾಸ. ಈಕೆಯ ಮಾವಂದಿರಾದ ವಿಜಯಕುಮಾರ್ ಶೆಟ್ಟಿ ಮತ್ತು ದಿಲೀಪ್ಕುಮಾರ್ ಶೆಟ್ಟಿ ಕೃಷಿಯನ್ನೇ ಅವಲಂಬಿಸಿ ದುಡಿಯುತ್ತಿರುವ  ಯುವಕರು. ಜೊತೆಗೆ ಶ್ರಮಜೀವಿಗಳು. ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಓಟದಲ್ಲಿ ಸಾಧನೆಯನ್ನು ತೋರಿಸಿದವರು. ಈಜೂ ಕೂಡ ಇವರ ಇನ್ನೊಂದು ಆಸಕ್ತಿ ಕ್ಷೇತ್ರ. ತಂದೆ ಚಿದಾನಂದರು ಸದಾ ಸಮಚಿತ್ತದವರು. ಸಜ್ಜನಿಕೆ ಇವರ ವ್ಯಕ್ತಿತ್ವದ ಪ್ರಮುಖ ಅಂಶ. ಮಗಳು ಏಷ್ಯನ್ ಗೇಮ್ಸ್ನಲ್ಲಿ ತೋರಿದ ಸಾಧನೆ ಮೆಚ್ಚಿ ನೂರಾರು ಕರೆಗಳು ಬಂದಾಗ ಎಲ್ಲರಿಗೂ ಹಸನ್ಮುಖರಾಗಿಯೇ ಉತ್ತರಿಸಿದವರು.  ಈ ಎಲ್ಲಾ ಸಾಧನೆಗಳಿಗೆ ನಿಮ್ಮ ಪ್ರೋತ್ಸಾಹ ಮತ್ತು ಆಶೀವರ್ಾದಗಳೇ ಪ್ರಮುಖ ಕಾರಣಗಳೆಂದು  ನಿರಹಂಕಾರದಿಂದ ನುಡಿದವರು. ಅಶ್ವಿನಿಯನ್ನು ಅಭಿನಂದಿಸುವ ನೆಪದಲ್ಲಿ ನೂರಾರು ಮಂದಿ ಮನೆಗೆ ಬಂದಾಗ ಅವರನ್ನು ಆದರದಿಂದ ಸ್ವಾಗತಿಸಿ, ತುಂಬು ಮಾತುಗಳಿಂದ ಗೌರವಿಸಿದವರು. ಈಕೆಯ ತಾಯಿ ಯಶೋಧ ಬಂದ ಅತಿಥಿಗಳಿಗೆ  ಯಾವುದೇ ಬೇಸರವಿಲ್ಲದೇ ಸಂತಸದಿಂದ ಆತಿಥ್ಯ ನೀಡಿದವರು.  ಈ ದಂಪತಿಗಳ ಸುಪುತ್ರಿಯಾಗಿ 7-10-1987 ರಂದು ಅಶ್ವಿನಿ ಜನಿಸಿದಳು.
ವಿದ್ಯಾಭ್ಯಾಸ :
ಅಶ್ವಿನಿ ಬೆಳೆದದ್ದು ಹಳ್ಳಿಯ ಕೃಷಿಕುಟುಂಬದಲ್ಲಿ. ಈಕೆಯ ಓಟದ ಆರಂಭವೇ ಈ ಜೀವನದಿಂದ ಸ್ಫೂತರ್ಿ ಪಡೆದುದು. ತಂದೆ ಚಿದಾನಂದ ಶೆಟ್ಟಿ ಮಗಳನ್ನು ಸಿದ್ದಾಪುರ  ಪೌಢಶಾಲಾ ಮೈದಾನಕ್ಕೆ ಆಗಾಗ ಕರೆದುಕೊಂಡು ಹೋಗಿ ಓಟಕ್ಕೆ ಪ್ರೋತ್ಸಾಹಿಸುತ್ತಿದ್ದರು. ಹೊಸಂಗಡಿಯ ಕೆ.ಪಿ.ಸಿ. ಯ ಆಂಗ್ಲಮಾಧ್ಯಮ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಈಕೆ ಪ್ರೌಢಶಿಕ್ಷಣವನ್ನು ಬೆಂಗಳೂರಿನ ವಿದ್ಯಾನಗರದ ಕ್ರೀಡಾ ಮತ್ತು ವಸತಿಶಾಲೆಯಲ್ಲಿ ಮುಂದುವರಿಸಿದಳು. ಈಕೆಯ ಕ್ರೀಡಾಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸಿದವರು ಇಲ್ಲಿನ ಶಿಕ್ಷಕ ಮತ್ತು ತರಬೇತುದಾರ ಶ್ರೀ ಮಂಜುನಾಥ.  ಮುಂದೆ ಒಂದು ವರ್ಷ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ ಈಕೆ ಕ್ರೀಡಾರಂಗದಲ್ಲಿ  ಸಾಧಿಸುತ್ತಾ ಸಾಗಿದಳು.
ಟಾಟಾ ಅಥ್ಲೆಟಿಕ್ ಅಕಾಡೆಮಿ :
ಈಕೆಯನ್ನು ಕ್ರೀಡಾರಂಗಕ್ಕೆ ಅಮೂಲ್ಯ ಕೊಡುಗೆಯಾಗಿ ನೀಡುವಲ್ಲಿ ಶ್ರಮಿಸಿದ ಇನ್ನೊಂದು ಸಂಸ್ಥೆ ಟಾಟಾ ಅಥ್ಲೆಟಿಕ್ ಅಕಾಡೆಮಿ. ಜೆಮ್ಶೆಡ್ಪುರದಲ್ಲಿರುವ ಈ ಸಂಸ್ಥೆಯಲ್ಲಿ ಈಕೆಗೆ ತರಬೇತುದಾರರಾಗಿ ಲಭಿಸಿದವರು ಶ್ರೀ ಸನ್ಮಾನ್ಸಿಂಗ್.  ಇವರ ಮಾರ್ಗದರ್ಶನವು ಈಕೆಯ ಸಾಧನೆಯ ಛಲಕ್ಕೆ ಮತ್ತಷ್ಟು ಹುರುಪನ್ನು ನೀಡಿತು.
ಭಾರತೀಯ ಕ್ರೀಡಾ ಪ್ರಾಧಿಕಾರ :
ಈ ಕ್ಷೇತ್ರದಲ್ಲಿ ಮಹತ್ವದ ಸಾಧನೆಯ ಕನಸು ಹೊತ್ತ ಅಶ್ವಿನಿಗೆ ಮುಂದಿನ ತರಬೇತಿಯ ಅವಕಾಶ ನೀಡಿದುದು ಭಾರತೀಯ ಕ್ರೀಡಾ ಪ್ರಾಧಿಕಾರ. ಸುಮಾರು ಎರಡು ವರ್ಷಗಳ ತರಬೇತಿಯನ್ನು ಪಾಟಿಯಾಲ ಮತ್ತು ಬೆಂಗಳೂರಿನಲ್ಲಿ ಪಡೆದ ಈಕೆ ಈ ಕ್ಷೇತ್ರದಲ್ಲಿ ತಾರೆಯಾಗಿ ಹೊರಹೊಮ್ಮಲು ಭದ್ರ ವೇದಿಕೆಯನ್ನು ಈ ಪ್ರಾಧಿಕಾರವು ಕಲ್ಪಿಸಿತು.  ಮುಂದೆ ಉಕ್ರೇನಿನ ಯೂರಿ ಆಕರ್ೋಡನಿಕ್ರಿಂದ ತರಬೇತಿ ಪಡೆಯುವ ಭಾಗ್ಯ ಪಡೆದು  ಈ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ದೇಶದ ಜನರ ಮುಂದೆ ತೆರೆದಿಟ್ಟಳು.
ಕ್ರೀಡಾ ಸಾಧನೆಯಲ್ಲಿ ಸಾಗರೋಲ್ಲಂಘನ :
ಬೇರೆ ಬೇರೆ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಅಶ್ವಿನಿ ದೇಶದ ಕೀತರ್ಿಯನ್ನು ಸಾಗರದಾಚೆಗೂ ಮುಟ್ಟಿಸುವಲ್ಲಿ ಹಿಂದೆ ಬೀಳಲಿಲ್ಲ. ಮಲೇಷಿಯಾ, ಇರಾನ್, ಡಾಕ್ಕಾ, ಚೀನಾ ಮೊದಲಾದ ದೇಶಗಳಲ್ಲಿ ನಡೆದ ಸ್ಪಧರ್ೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ದೇಶದ ಜನರ ಗೌರವಕ್ಕೆ ಪಾತ್ರಳಾದಳು.
ಕಾಮನ್ವೆಲ್ತ್ ಕ್ರೀಡಾಕೂಟ :
ಅಶ್ವಿನಿಯ ಸಾಧನೆಯನ್ನು ದೇಶಕ್ಕೆ ಪರಿಚಯಿಸಿದ ಕ್ರೀಡಾಕೂಟ ದೆಹಲಿಯ ಕಾಮನ್ವೆಲ್ತ್. 12-10-2010 ರಲ್ಲಿ ನಡೆದ 19 ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಶ್ವಿನಿ  4 ಥ 400 ಮೀಟರ್ ರಿಲೇಯಲ್ಲಿ ಭಾರತಕ್ಕೆ ಚಿನ್ನವನ್ನು ತಂದು ಚಿನ್ನದ ಹುಡುಗಿಯಾದಳು.
ಏಷ್ಯನ್ ಕ್ರೀಡಾಕೂಟ :
  ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟಕ್ಕೆ ಲಗ್ಗೆ ಇಟ್ಟ ಅಶ್ವಿನಿ ಅಲ್ಲಿಯೂ ಹಿಂದೆ ಬೀಳಲಿಲ್ಲ. ನವೆಂಬರ್ 25 ಮತ್ತು 27 ರಂದು ನಡೆದ 16 ನೇ ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀಟರ್ ಹಡರ್್ಲ್ಸ್ ಮತ್ತು ರಿಲೇಯಲ್ಲಿ ಎರಡು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಭಾರತದ  ಗೌರವವನ್ನು ಹೆಚ್ಚಿಸಿದಳು.
 ಒಲಿಂಪಿಕ್ನತ್ತ ಚಿತ್ತ :
ಪಿ.ಟಿ. ಉಷಾಳೇ ತನ್ನ ಸಾಧನೆಗೆ ಪ್ರಧಾನ ಪ್ರೇರಣೆ ಎಂದು ಅಭಿಮಾನಪೂರ್ವಕವಾಗಿ ಹೇಳಿಕೊಳ್ಳುವ ಅಶ್ವಿನಿಯ ಚಿತ್ತ ಮುಂದಿನ ಒಲಿಂಪಿಕ್ನತ್ತ. 2012 ರಲ್ಲಿ ಲಂಡನ್ನಿನಲ್ಲಿ  ನಡೆಯಲಿರುವ ಒಲಿಂಪಿಕ್ನಲ್ಲಿ ಪದಕ ಪಡೆಯುವ ಗುರಿ ಈಕೆಯ ಮುಂದಿದೆ. ತಂದೆ ಚಿದಾನಂದ ಶೆಟ್ಟಿಯವರು ನನ್ನ ಮಗಳಲ್ಲಿ ಹಿಡಿದ ಕೆಲಸವನ್ನು ಸಾಧಿಸಿ ತೋರಿಸುವ ಛಲಗಾರಿಕೆ ಇದೆ. ಅದಕ್ಕೆ ಅಗತ್ಯವಾದ ಕಠಿನ ಶ್ರಮವೂ ಆಕೆಯಲ್ಲಿದೆ. ಹಾಗಾಗಿ ಒಲಿಂಪಿಕ್ನಲ್ಲೂ ಪದಕ ಪಡೆಯುವಳೆಂಬ ವಿಶ್ವಾಸ ನನಗಿದೆ ಎನ್ನುತ್ತಾರೆ.
ಕೃತಜ್ಞತಾ ಭಾವ :
ಅಶ್ವಿನಿ ಶ್ರೀಮಂತ ಮನೆತನದವಳಲ್ಲ. ಮಧ್ಯಮವರ್ಗದ ಕುಟುಂಬದವಳು. ಈ ಸಾಧನೆಗಳು ಆಕೆಯಲ್ಲಿ ಯಾವುದೇ ಅಹಂಭಾವವನ್ನು ಬೆಳೆಸಿಲ್ಲ. ಕನರ್ಾಟಕ ಸರಕಾರದ 2010 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನಳಾದ ಈಕೆ ತನ್ನ ಸಾಧನೆಯ ಸಂಪೂರ್ಣ ಫಲ ನನ್ನನ್ನು ನಿರಂತರ ಪ್ರೋತ್ಸಾಹಿಸಿದ ಕ್ರೀಡಾಭಿಮಾನಿಗಳಿಗೆ ಸಲ್ಲುತ್ತದೆ ಎಂದು ನಮ್ರಳಾಗಿ ನುಡಿಯುತ್ತಾಳೆ.  ಗ್ರಾಮೀಣ ಭಾಗದಲ್ಲಿರುವ ಈಕೆಯ ಮನೆಗೆ ವಾಹನ ಚಲನೆಗೆ ಯೋಗ್ಯವಾದ ರಸ್ತೆಯ ಕೊರತೆ ಕಾಡುತ್ತಿದೆ. ಗದ್ದೆಯ ಅಂಚಿನಲ್ಲೇ ಕೆಲವು ದೂರ ನಡೆದು ಸಾಗಬೇಕಾಗಿದೆ. ಇದೀಗ ಮನೆಯ ತನಕ ರಸ್ತೆ ನಿಮರ್ಾಣದ ಭರವಸೆಯೂ ಶಾಸಕರಿಂದ ಲಭಿಸಿರುತ್ತದೆ.  ಬಂಗಾರದ ಹುಡುಗಿ ದೇಶಕ್ಕೆ ಬಂಗಾರ ತಂದಾಗ ಪಟಾಕಿ ಸಿಡಿಸಿ ಸಂಭ್ರಮಿಸಿದ ಇಲ್ಲಿನ ಅಭಿಮಾನಿಗಳಿಗೆ ಮನೆಮಗಳಾದ ಅಶ್ವಿನಿಯ ಈ ಸಾಧನೆ ಅತೀವ ಸಂತಸ ತಂದಿದೆ.   ಡಿಸೆಂಬರ್ ಒಂದರಂದು ಹುಟ್ಟೂರಿನಲ್ಲಿ ಸಂಭ್ರಮದ ಸನ್ಮಾನ ಸಮಾರಂಭ ಏರ್ಪಡಿಸಿರುವ ಇಲ್ಲಿನ ಜನತೆ ತೋರಿಸಿದ ಅಭಿಮಾನಕ್ಕೆ  ಅಶ್ವಿನಿ ಕುಟುಂಬ ಕೃತಜ್ಞತಾಭಾವ ಸಲ್ಲಿಸುತ್ತಿದೆ. ಇದೀಗ ಅಶ್ವಿನಿ ಒಲಿಂಪಿಕ್ನಲ್ಲೂ ಪದಕ ಪಡೆಯಲಿ ಎಂದು  ಇಲ್ಲಿನ ಜನರು ನಿರಂತರ ಭಗವಂತನಲ್ಲಿ ಪ್ರಾಥರ್ಿಸುತ್ತಿದ್ದಾರೆ.               
ಡಾ.ಶ್ರೀಕಾಂತ್ಸಿದ್ದಾಪುರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ